ಕಾರ್ಕಳ: ಚುನಾವಣಾ ಆಯೋಗ, ಸ್ಥಳೀಯ ಆಡಳಿತ ವತಿಯಿಂದ ಮತದಾನದ ಜಾಗೃತಿ ಕುರಿತಂತೆ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸುವ ಸಲುವಾಗಿ ಸ್ಥಳೀಯ ಪಂಚಾಯತ್ ಹಾಗೂ ಪುರಸಭೆ ವತಿಯಿಂದ ರ್ಯಾಲಿ ಹಮ್ಮಿಕೊಂಡಿದ್ದು ಈ ವೇಳೆ ಬಿಜೆಪಿ ಸರ್ಕಾರದ ಸಾಧನೆ ಕುರಿತು ಪ್ರಚಾರದ ವಾಹನವು ಕಂಡು ಬಂದಿತು.
ಮತದಾನ ಜಾಗೃತಿಯಲ್ಲಿ ಪಕ್ಷವೊಂದರ ಪ್ರಚಾರ ನಡೆದದ್ದು ಬಹಳಷ್ಟು ಮಂದಿಯ ಕೆಂಗಣ್ಣಿಗೆ ಗುರಿಯಾಯಿತು. ಈ ಹಿನ್ನಲೆಯಲ್ಲಿ ಸ್ಥಳೀಯ ವಿರೋಧ ಪಕ್ಷಗಳ ಕಾರ್ಯಕರ್ತರು ಆಕ್ರೋಶ ಗೊಂಡು ಬಿಜೆಪಿ ಪ್ರಚಾರದ ವಾಹನವನ್ನು ತಡೆದು ನಿಲ್ಲಿಸಿ ವಾಹನ ಚಾಲಕರನ್ನು ತರಾಟೆಗೆ ತೆಗೆದುಕೊಂಡರು. ಅಂದ ಹಾಗೆ ಈ ಘಟನೆ ಶುಕ್ರವಾರ ಸಂಭವಿಸಿದೆ.
ಮತದಾನದ ಜಾಗೃತಿ ರಾಲಿಯಲ್ಲಿ, ಪಕ್ಷವೊಂದರ ಪ್ರಚಾರ ವಾಹನವನ್ನು ಚುನಾವಣಾ ಆಯೋಗ ತಡೆದೆ ನಿಲ್ಲಿಸಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿದೆ.