ತೆಲಂಗಾಣ: ಬಿಸಿಲಿನ ತಾಪ ತಾಳಲಾರದೇ ಕಳೆದ ಒಂದು ತಿಂಗಳಲ್ಲಿ 17 ಜನರು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತಪಟ್ಟವರಲ್ಲಿ ಬಹುತೇಕರು ರೈತರು ಮತ್ತು ಕಾರ್ಮಿಕರಾಗಿದ್ದಾರೆ.
ತೀವ್ರ ಶಾಖಕ್ಕೆ ಒಳಗಾಗಿ ವಿವಿಧ ಜಿಲ್ಲಾ ಮತ್ತು ಪ್ರಾದೇಶಿಕ ಆಸ್ಪತ್ರೆಗಳಲ್ಲಿ ಪ್ರತಿ ದಿನ 5-10 ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೆಚ್ಚಿನ ತಾಪಮಾನದಿಂದ ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾಗುತ್ತಿರುವುದರಿಂದ ಕೋಳಿ ಫಾರಂ ಮಾಲೀಕರು ಮತ್ತು ಡೈರಿ ಉದ್ಯಮಕ್ಕೆ ಸಂಬAಧಿಸಿದ ಜನರು ಸಹ ಆತಂಕಗೊAಡಿದ್ದಾರೆ. ಇನ್ನೂ ನಾಲ್ಕು ದಿನ ಬಿಸಿಲಿನ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬಿಸಿಲಿನ ತಾಪ ತಾಳಲಾರದೇ ತೆಲಂಗಾಣದಲ್ಲಿ 17 ಮಂದಿ ಸಾವು
Subscribe
Login
0 Comments