ಮಂಡ್ಯ: ಮಂಡ್ಯದ ಕಾಲೇಜಿನಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಹುಡುಗರ ಮುಂದೆ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಕಾನ್ ಖಾನ್ ವಿದ್ಯಾರ್ಥಿನಿಗೆ ಜಮಾತ್ ಉಲ್ಮಾ ಐ ಹಿಂದ್ 5ಲಕ್ಷ ರೂ. ನಗದು ಘೋಷಿಸುವ ಮೂಲಕ ಬಂಪರ್ ಆಫರ್ ನೀಡಿದೆ.
ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಇವರು ಹಿಜಾಬ್ ಧರಿಸಿ ಕಾಲೇಜು ಆವರಣದೊಳಗೆ ಆಗಮಿಸುತ್ತಿದ್ದ ವೇಳೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಆಕೆಯನ್ನು ಸುತ್ತುವರಿಸಿ ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದು, ಈ ವೇಳೆ ಆಕೆ ಅಲ್ಲಾಹು ಅಕ್ಬರ್ ಎಂದು ಘೊಷಣೆ ಕೂಗುವ ಮೂಲಕ ಪ್ರತಿರೋಧಿಸಿದ್ದಾಳೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದನ್ನು ಗಮನಿಸಿದ ಜಮಾತ್ ಉಲ್ಮಾ ಐ ಹಿಂದ್ ಆಕೆಯ ಸಾಹಸಕ್ಕೆ ಮೆಚ್ಚಿ 5 ಲಕ್ಷ ರೂ ಬಹುಮಾನ ನೀಡುವುದಾಗಿ ಪ್ರಕಟಿಸಿದೆ.