ಬೆಂಗಳೂರು: ರಾಜ್ಯದಲ್ಲಿ ಹಳದಿ ಜ್ವರದ ಭೀತಿ ಎದುರಾಗಿದ್ದು, ಸುಡಾನ್ನಿಂದ ಬೆಂಗಳೂರಿಗೆ ಬಂದ 78 ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.ದೇಶದಲ್ಲಿ ಕೋವಿಡ್ ಆತಂಕ ದೂರವಾದ ಬೆನ್ನಲ್ಲೇ ಇದೀಗ ಮತ್ತೆ ಹಳದಿ ಜ್ವರದ ಭೀತಿ ಆತಂಕಕ್ಕೀಡು ಮಾಡಿದೆ. ಸುಡಾನ್ನಿಂದ ಬಂದವರ ಪೈಕಿ 78 ಮಂದಿ ಹಳದಿ ಜ್ವರಕ್ಕೆ ಲಸಿಕೆ ತೆಗೆದುಕೊಂಡಿರಲಿಲ್ಲ. ಈ ಪೈಕಿ ಕೇರಳ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕ, ತೆಲಂಗಾಣ, ತಮಿಳುನಾಡಿನವರು ನಂತರದ ಸ್ಥಾನದಲ್ಲಿದ್ದಾರೆ. ಹೀಗಾಗಿ ಲಸಿಕೆ ಪಡೆಯದವರನ್ನು 6 ದಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ.