ತಮಿಳುನಾಡು: ರಾಜ್ಯದ ಕಡಲೂರಿನ ತಿರುವಂತಿಪುರಂ ಶ್ರೀ ದೇವನಾಥಸ್ವಾಮಿ ದೇಗುಲದ ಹೊರಗಡೆ 91 ಜೋಡಿಗಳು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ತಮಿಳು ಸಂಪ್ರದಾಯದಂತೆ ಈ ತಿಂಗಳು ಶುಭಕರವಾದ ತಿಂಗಳಾಗಿದೆ. ಆದ್ದರಿಂದಲೇ ಲಾಕ್ಡೌನ್ ನಡುವೆಯೂ ದೇಗುಲದ ಹೊರಗಿನ ರಸ್ತೆಯಲ್ಲಿ 91 ಜೋಡಿಗಳು ವಿವಾಹವಾದವು ಎಂದು ದೇಗುಲದ ಆಡಳಿತ ಮಂಡಳಿ ಅಧಿಕಾರಿ ಎ.ವೀರಬತೀರನ್ ಹಾಗೂ ಕಾರ್ಯದರ್ಶಿ ರತೀನಾ ಸಭಾಪತಿ ತಿಳಿಸಿದ್ದಾರೆ.
ಭಾನುವಾರ ಶುಭ ಮುಹೂರ್ತವಿದ್ದ ಕಾರಣ 110 ಜೋಡಿಗಳು ಮದುವೆಗೆ ನೋಂದಣಿ ಮಾಡಿಸಿದ್ದು, ಬೆಳಿಗ್ಗೆ 4.30 ರಿಂದ 11 ಗಂಟೆಯ ನಡುವೆ 91 ಜೋಡಿಗಳಿಗೆ ಮದುವೆ ಮಾಡಿಸಲಾಯಿತು. ವಿಷ್ಣುವಿನ ಈ ದೇಗುಲದಲ್ಲಿ ಮದುವೆಯಾದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಬೇರೆ ಬೇರೆ ಪ್ರದೇಶಗಳಿಂದಲೂ ಜನರು ಇಲ್ಲಿಗೆ ಬಂದು ಮದುವೆಯಾಗುತ್ತಾರೆ.