ಕರುನಾಡಿನ ಪ್ರೀತಿಯ ಸಾಹಸ ಸಿಂಹ ವಿಷ್ಣುದಾದ ನಮ್ಮನ್ನು ಅಗಲಿ ಇಂದಿಗೆ 12 ವರ್ಷಗಳಾದವು. ಅವರು ನಮ್ಮನ್ನು ಅಗಲಿ 12 ವರ್ಷಗಳಾದರೂ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಕಿಂಚಿತ್ತು ಕಡಿಮೆ ಆಗಿಲ್ಲ. ಅವರ ಹುಟ್ಟುಹಬ್ಬವನ್ನು ವರ್ಷದಿಂದ ವರ್ಷಕ್ಕೆ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸುತ್ತಲೇ ಬರುತ್ತಿದ್ದಾರೆ. ವಿಷ್ಣುದಾದ ಅವರ ಹೆಸರಿನಲ್ಲಿ ಬಹಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ.
“ವಂಶವೃಕ್ಷ’ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಸಂಪತ್ ಕುಮಾರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣುದಾದ ತದನಂತರ ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಪಾತ್ರ ಮಾಡುವ ಮೂಲಕ ಕರುನಾಡಿನ ಪ್ರೀತಿಯ ವಿಷ್ಣುವರ್ಧನ್ ಆದರು. ಅದಾದ ನಂತರ ಒಂದಾದ ಮೇಲೊಂದು ಹಿಟ್ ಚಿತ್ರಗಳನ್ನು ನೀಡುತ್ತಾ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದರು. ಚಾರಿತ್ರಿಕ, ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ನಟಿಸಿದ ವಿಷ್ಣುದಾದ 204 ಚಿತ್ರಗಳಲ್ಲಿ ನಟಿಸಿದ್ದಾರೆ.
ಕರುನಾಡಿನ ಸಾಹಸ ಸಿಂಹ ವಿಷ್ಣುದಾದ ನಮ್ಮನ್ನು ಅಗಲಿದ್ದರು ಅಭಿಮಾನಿಗಳ ಮನಸ್ಸಿನಲ್ಲಿ ಎಂದೆದೂ ಜೀವಂತವಾಗಿರುತ್ತಾರೆ.