Sunday, June 8, 2025

ಇನ್ನುಮುಂದೆ ರಸ್ತೆ ಎಲ್ಲೆಂದರಲ್ಲಿ ದಾಟಿದರೆ ಪಾದಾಚಾರಿಗಳಿಗೆ ಬೀಳುತ್ತೆ ಫೈನ್

ಬೆಂಗಳೂರು: ಇದುವರೆಗೆ ವಾಹನಗಳನ್ನು ಬೇಕಾಬಿಟ್ಟಿ ಚಲಾಯಿಸುವವರಿಗೆ, ಸಿಗ್ನಲ್ ಜಂಪ್ ಮಾಡುವವರಿಗೆ, ಒನ್ ವೇ ಅಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಬರುವ ವಾಹನ ಸವಾರರಿಗಷ್ಟೇ ದಂಡ ವಿಧಿಸಲಾಗುತ್ತಿತ್ತು ಹಾಗೂ ಗಾಡಿಯನ್ನು ಸೀಜ್ ಮಾಡಲಾಗುತ್ತಿತ್ತು. ಆದರೆ ಇದೀಗ ಝೀಬ್ರಾ ಕ್ರಾಸ್ ಬಿಟ್ಟು ಬೇರೆ ಕಡೆಯಾಲ್ಲಿ ದಾಟುವ ಪಾದಚಾರಿಗಳಿಗೂ ದಂಡ ವಿಧಿಸಲು ಬೆಂಗಳೂರು ಸಂಚಾರಿ ಪೊಲೀಸರು ಚಿಂತನೆ ನಡೆಸಿದ್ದಾರೆ.

ಝೀಬ್ರಾ ಕ್ರಾಸ್ ಪಾದಚಾರಿಗಳು ರಸ್ತೆ ದಾಟಲೆಂದೇ ಮಾಡಿರುವ ವ್ಯವಸ್ಥೆಯಾಗಿದೆ. ಇಷ್ಟು ದಿನಗಳವರೆಗೆ ಪಾದಾಚಾರಿಗಳು ಝೀಬ್ರಾ ಪಟ್ಟಿ ಇರುವಲ್ಲೇ ದಾಟಬೇಕೆಂದಿರಲ್ಲಿ ಆದರೆ ಇನ್ನು ಮುಂದೆ ಝೀಬ್ರಾ ಕ್ರಾಸ್ ಬಿಟ್ಟು ಬೇರೆಕಡೆಗಳಲ್ಲಿ ದಾಟುವವರಿಗೆ 10 ರೂಪಾಯಿ ದಂಡ ವಿಧಿಸುವ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ.

ಕಳೆದ ವರ್ಷ ಝೀಬ್ರಾ ಕ್ರಾಸ್ ಬಿಟ್ಟು ರಸ್ತೆಯ ಬೇರೆಕಡೆಯಲ್ಲಿ ದಾಟಿದ 69 ಪಾದಾಚಾರಿಗಳು ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಪೊಲೀಸರು ಝೀಬ್ರಾ ಕ್ರಾಸ್ ಬಿಟ್ಟು ಬೇರೆಕಡೆಯಲ್ಲಿ ದಾಟುವ ಪಾದಾಚಾರಿಗಳಿಗೆ ದಂಡ ವಿಧಿಸಲು ನಿರ್ಧರಿಸಿದ್ದಾರೆ. ಆದರೆ ಎಷ್ಟೋ ರಸ್ತೆಗಳು ಝೀಬ್ರಾ ಪಟ್ಟಿಯನ್ನೇ ಹೊಂದಿರುವುದಿಲ್ಲ ಜೊತೆಗೆ ಪಾದಾಚಾರಿ ಮಾರ್ಗಗಳು ಸರಿಯಿರುವುದಿಲ್ಲ. ಹೀಗಿರುವಾಗಾ ಈ ಯೋಜನೆಯು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles