ಕೊಚ್ಚಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಮೊದಲ ಬಾರಿಗೆ ರಾತ್ರಿಯಲ್ಲಿ ಪ್ರಕರಣವೊಂದರ ವಿಚಾರಣೆ ಮಾಡಲಾಗಿದೆ. ಈ ಮೂಲಕ ಕೇರಳದ ಹೈಕೋರ್ಟ್ ಇತಿಹಾಸ ಸೃಷ್ಟಿ ಮಾಡಿದೆ.
ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿದ್ದ ಹಡಗಿಗೆ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಈ ತೆರಿಗೆಯನ್ನು ಹಡಗು ಮಾಲೀಕರು ತೆರಲು ನಿರಾಕರಣೆ ಮಾಡಿದ್ದಾರೆ. ಜಸ್ಟೀಸ್ ದೇವನ್ ರಾಮಚಂದ್ರನ್ ಅವರು ರಾತ್ರಿ 11.30ಕ್ಕೆ ವೀಡಿಯೊ ಕಾನ್ಫರೆನ್ಸ್ ಮುಖಾಂತರ ವರ್ಚುವಲ್ ವಿಚಾರಣೆ ನಡೆಸಿ ಪಾವತಿ ಮಾಡದ ಹಣವನ್ನು ಸಂದಾಯ ಮಾಡದೇ ಇದ್ದಲ್ಲಿ ಹಡಗನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿದರು. ಹಡಗು ಮಾಲೀಕರು ಒಟ್ಟು 2.44 ಕೋಟಿ ರೂ. ಗಳಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಈ ಬಾಕಿ ಇರುವ ಮೊತ್ತದ ಜೊತೆಗೆ 25,000 ರೂ. ಬಡ್ಡಿ ಸೇರಿಸಿ ಪಾವತಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.