ಉಡುಪಿ: 73 ನೇ ಗಣರಾಜ್ಯೋತ್ಸವದ ಅಂಗವಾಗಿ ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಪಥಸಂಚಲನದ ಸಾಂಸ್ಕೃತಿಕ ವಿಭಾಗದಲ್ಲಿ ಉಡುಪಿಯ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು ಮತ್ತು ಪೂರ್ಣ ಪ್ರಜ್ಞಾ ಕಾಲೇಜಿನ 14 ವಿದ್ಯಾರ್ಥಿಗಳನ್ನೊಳಗೊಂಡ ಉಡುಪಿ ಫೀಟ್ಸ್ ಎನ್ನುವ ಕಂಗೀಲು ನೃತ್ಯ ತಂಡ ಭಾಗವಹಿಸಿತು.
ಪಿಪಿಸಿಯ ನಿಧೀತಾ ಶೆಟ್ಟಿ, ಶರೋನ್ ವಿವೇನ ಮಾಬೆನ್, ದೀಪಾಶ್ರೀ, ಅನೀಶಾ ಶೆಟ್ಟಿ, ಚಿರಾಗ್ ಜಿ, ಕೋಟ್ಯಾನ್, ವರುಣ್ ಬಿ. ಕೋಟ್ಯಾನ್, ಶೀಜಲ್ ಪೂಜಾರಿ, ಭಾವನಾ ಪರಮೇಶ್ವರ ಗಾಂವ್ಕರ್, ಎಂಜಿಎಂನ ಅಂಕಿತ್ ಯು. ನಾಯಕ್, ಆಕಾಶ್ ಎಸ್. ಪ್ರಭು, ಭಾಗ್ಯಶ್ರೀ ಹೆಚ್, ಅಶ್ವಿನಿ ಜಿ. ಸುವರ್ಣ, ವ್ರಾಧಿಕ ಮಾಲಾರಾಣಿ ಎರ್ಮಾಳು, ಹರ್ಷಿತ್ ಕುಮಾರ್ ಹೊಸದಿಲ್ಲಿಯ ಪಥಸಂಚಲನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಗಳಿಗೆ ಕಿರಣ್ ಪಡುಬಿದ್ರಿ ಮತ್ತು ಗುರುಚರಣ್ ಪೊಲಿಪು ತರಬೇತಿಯನ್ನು ನೀಡಿದ್ದರು.