ಬೆಂಗಳೂರು: ಕೊರೋನಾ ಮೂರನೆ ಅಲೆಯ ಅಬ್ಬರದ ನಡುವೆ ಹೆಚ್ಚಾದ ಕೊರೋನಾ ಸಾವಿನ ಪ್ರಮಾಣವು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಬುಧವಾರ ಕರ್ನಾಟಕದಲ್ಲಿ 48,905 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 39 ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಆದ್ದರಿಂದ ಕೊರೋನಾ ನಿಯಮಗಳನ್ನು ಸಡಿಲಿಕೆ ಮಾಡಬಾರದೆಂದು ತಜ್ಞರ ತಂಡ ಸಲಹೆ ನೀಡಲು ಮುಂದಾಗಿದೆ.
ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್ ಬಿಪಿ, ಶ್ವಾಸಕೋಶದ ಖಾಯಿಲೆ ಇರುವವರು ಹಾಗೂ SARI ಹಾಗೂ ILI ನಿಂದ ಬಳಲುತ್ತಿರುವ ಸೋಂಕಿತರು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಅಷ್ಟೇ ಅಲ್ಲದೇ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೂ ಹೆಚ್ಚು ಅಪಾಯವಿದೆ. ಆದ್ದರಿಂದ ಮುಂದಿನ ಎರಡು ವಾರಗಳ ಕಾಲ ಕಠಿಣ ಕ್ರಮವನ್ನು ಸಡಿಲಗೊಳಿಸಬಾರದು ಎಂದು ಟಾಸ್ಕ್ ಫೋರ್ಸ್ ಟೀಂ ನಿರ್ಧರಿಸಿದೆ. ಆರೋಗ್ಯ ಇಲಾಖೆಯು ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಮಾಡಲು ಚಿಂತನೆ ಮಾಡಿದೆ. ಪ್ರಸ್ತುತ ಕೊರೋನಾ ನಿಯಮಗಳನ್ನು ಮುಂದುವರೆಸಲು ಸರ್ಕಾರ ನಿರ್ಧರಿಸಿದೆ.