Saturday, June 7, 2025

ಕರ್ನಾಟಕದಲ್ಲಿ ಇಳಿಮುಖ ಕಂಡ ಕೊರೊನಾ: ಒಂದೇ ದಿನ 38,083 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕಳೆದ 24ಗಂಟೆಗಳಲ್ಲಿ 38,083 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಂದೇ ದಿನ 49 ಮಂದಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ.


ರಾಜ್ಯದಲ್ಲಿ ಗುರುವಾರ ಪತ್ತೆಯಾಗಿರುವ 38,083 ಹೊಸ ಪಾಸಿಟಿವ್ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ17,717, ಮೈಸೂರಿನಲ್ಲಿ 2,587, ಮಂಡ್ಯದಲ್ಲಿ 1,802, ತುಮಕೂರಿನಲ್ಲಿ 1,584, ಹಾಸನದಲ್ಲಿ 1,452, ಧಾರವಾಡದಲ್ಲಿ 1,155, ಬೆಂಗಳೂರು ಗ್ರಾಮಾಂತರದಲ್ಲಿ 1,091, ಉಡುಪಿಯಲ್ಲಿ 948, ಕಲಬುರಗಿಯಲ್ಲಿ812, ಚಾಮರಾಜನಗರ 763, ಕೊಡಗು707, ದ.ಕನ್ನಡ 678, ಚಿಕ್ಕಬಳ್ಳಾಪುರ 665, ಬಳ್ಳಾರಿಯಲ್ಲಿ 651, ಶಿವಮೊಗ್ಗದಲ್ಲಿ 626, ಕೋಲಾರದಲ್ಲಿ 572, ಉತ್ತರ ಕನ್ನಡದಲ್ಲಿ 567, ಕೊಪ್ಪಳದಲ್ಲಿ 500, ಬೆಳಗಾವಿಯಲ್ಲಿ 480, ಬಾಗಲಕೋಟೆಯಲ್ಲಿ 345, ಚಿತ್ರದುರ್ಗ 286, ರಾಮನಗರದಲ್ಲಿ 279, ಗದಗದಲ್ಲಿ 267, ರಾಯಚೂರಿನಲ್ಲಿ 261, ದಾವಣಗೆರೆಯಲ್ಲಿ 257, ಬೀದರ್‌ನಲ್ಲಿ 250, ರಾಮನಗರದಲ್ಲಿ 279, ಚಿಕ್ಕಮಗಳೂರಿನಲ್ಲಿ 244, ವಿಜಯಪುರದಲ್ಲಿ 223, ಹಾವೇರಿಯಲ್ಲಿ 184, ಯಾದಗಿರಿ ಜಿಲ್ಲೆಯಲ್ಲಿ 130ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.


ರಾಜ್ಯದಲ್ಲಿ ಈವರೆಗೆ 36,92,496 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 67,236 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 33,25,001ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ 3,28,711 ಸಕ್ರಿಯ ಪ್ರಕರಣಗಳಿವೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles