ಬೆಂಗಳೂರು: ರಾಜ್ಯದ ಬೆಂಗಳೂರು, ಮಂಗಳೂರು ಹಾಗೂ ಮೈಸೂರು ನಗರಗಳಲ್ಲಿ ಹೆಚ್ಚಿನ ವಾಯು ಮಾಲಿನ್ಯ ಕಂಡುಬಂದಿದೆ ಎಂದು ಗ್ರೀನ್ ಪೀಸ್ ಇಂಡಿಯಾ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ ತಿಳಿಸಿರುವ ಪಿಎಂ 2.5 ಮಟ್ಟಕ್ಕಿಂತ ವಿಶಾಖಪಟ್ಟಣ, ಹೈದ್ರಾಬಾದ್, ಕೊಯಮತ್ತೂರು, ಬೆಂಗಳೂರು, ಮಂಗಳೂರು ಮತ್ತು ಅಮರಾವತಿಯಲ್ಲಿ 6 ರಿಂದ 7 ಪಟ್ಟು, ಹಾಗೂ ಮೈಸೂರು, ಕೊಚ್ಚಿ, ಚೆನ್ನೈ ಮತ್ತು ಪುದುಚೇರಿಯಲ್ಲಿ 4 ರಿಂದ 5 ಪಟ್ಟು ವಾಯುಮಾಲಿನ್ಯ ಹೆಚ್ಚಿದೆ ಎಂದು ಗ್ರೀನ್ ಪೀಸ್ ಇಂಡಿಯಾ ವರದಿ ನೀಡಿದೆ.
ಗ್ರೀನ್ ಪೀಸ್ ಇಂಡಿಯಾವು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ 2020 ರ ನವೆಂಬರ್ 20 ರಿಂದ 2021 ರ ನವೆಂಬರ್ 20 ವರೆಗಿನ ದತ್ತಾಂಶಗಳ ಕುರಿತು ಅಧ್ಯಯನ ನಡೆಸಿದೆ. ವಿಶಾಖಪಟ್ಟಣ, ಹೈದ್ರಾಬಾದ್, ಕೊಯಮತ್ತೂರು, ಬೆಂಗಳೂರು, ಮಂಗಳೂರು, ಅಮರಾವತಿ, ಮೈಸೂರು, ಕೊಚ್ಚಿ, ಚೆನ್ನೈ, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದ 10 ನಗರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಗುಣಮಟ್ಟಕ್ಕಿಂತಲೂ ಹೆಚ್ಚಿನ ಮಾಲಿನ್ಯ ವರದಿಯಾಗಿದೆ ಎಂದು ಗ್ರೀನ್ ಪೀಸ್ ಇಂಡಿಯಾ ತಿಳಿಸಿದೆ.