Sunday, June 8, 2025

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಗೌರವ ಸಲ್ಲಿಸಿದ ರೋಟರಿ ಸಂಸ್ಥೆ

ಕಾರ್ಕಳ: ರೋಟರಿ ಸಂಸ್ಥೆ ಕಾರ್ಕಳ ಇಲ್ಲಿಗೆ ರೋಟರಿ ಗವರ್ನರ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಹೋಟೆಲ್ ಪ್ರಕಾಶ್ ಇಲ್ಲಿನ “ಉತ್ಸವ “ಸಭಾಂಗಣದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಗವರ್ನರ್ ರಾಮಚಂದ್ರ ಮೂರ್ತಿ ಅವರು ಮಾತನಾಡಿ “ಪ್ರತಿಯೊಂದು ವ್ಯಕ್ತಿಯೂ ನಿಸ್ವಾರ್ಥ ಸೇವೆಯನ್ನು ಮಾಡುವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಡಬೇಕು” ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಗವರ್ನರ್ ರಾಮಚಂದ್ರ ಮೂರ್ತಿ ಅವರು ನಾಲ್ಕು ಮಂದಿ ಫಲಾನುಭವಿಗಳಿಗೆ ಗಾಲಿಕುರ್ಚಿಯನ್ನು ಹಸ್ತಾಂತರಿಸಿದರು. ಹಾಗೂ ಶ್ರೀಮತಿ ಆಶಾ ಕೋಟ್ಯಾನ್, ಶ್ರೀ ಸುಧಾಕರ ಪೈ, ನಿಟ್ಟೆಯ ಅಹಮದ್ ಹುಸೇನ್ ಅವರಿಗೆ ತಮ್ಮ ವೃತ್ತಿಯಲ್ಲಿ ಸಲ್ಲಿಸಿದ ಸೇವೆಯ ಮಾನದಂಡದಲ್ಲಿ ಸನ್ಮಾನಿಸಿದರು.

ಸಂಸ್ಥೆಯ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಅವರು ಸಂಸ್ಥೆಯ ಕಾರ್ಯಕ್ರಮಗಳ ವಾರ್ಷಿಕ ವರದಿಯನ್ನು ನೀಡಿದರು.ಸಹಾಯಕ ಗವರ್ನರ್ ರೋಟೇರಿಯನ್ ಅರುಣ್ ಹೆಗಡೆ ಅವರು ಕ್ರೈಸ್ಟ್ ಕಿಂಗ್ ಶಾಲೆಯ ಇಂಟರ್ಯಾಕ್ಟ್ ಮಕ್ಕಳಿಗೆ ಸ್ವಚ್ಛತೆಯ ಕುರಿತು ಮಾಹಿತಿ ನೀಡುವ ಫಲಕಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭ ರೋಟೇರಿಯನ್ ಅರುಣ ಎಂ ಶೆಣೈ ಅವರು ರೋಟರಿ ದತ್ತಿ ನಿಧಿಗೆ ಕೊಡುಗೆ ನೀಡಿದ ರೋಟರಿ ಸದಸ್ಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ನೆರವೇರಿಸಿದರು. ರೋಟರಿ ಅಧ್ಯಕ್ಷರಾದ ಸುರೇಶ್ ನಾಯಕ್ ಸ್ವಾಗತಿಸಿದರು. ರೋಟೇರಿಯನ್ ಗೀತಾ ಸುಧೀರ್ ಕಾಮತ್ ಪ್ರಾರ್ಥನೆ ನೆರವೇರಿಸಿದರು. ರೋಟೇರಿಯನ್ ಸುವರ್ಣ ನಾಯಕ್ ಜಿಲ್ಲಾ ಗವರ್ನರ್ ಅವರ ಪರಿಚಯವನ್ನು ಮಾಡಿದರು. ರೋಟೇರಿಯನ್ ಸತೀಶ್ ಆಚಾರ್ಯ ರೋಟೇರಿಯನ್ ಇಕ್ಬಾಲ್ ಅಹಮದ್ ಸನ್ಮಾನಿತರ ಪರಿಚಯವನ್ನು ಮಾಡಿದರು.

ಸಂಸ್ಥೆಯ ವಾರಪತ್ರಿಕೆಯಾದ “ಸರ್ವಿಸ್ ” ಅನ್ನು ವಲಯ ಸೇನಾನಿ ಸುರೇಂದ್ರ ನಾಯಕ ಅವರು ಬಿಡುಗಡೆ ಮಾಡಿದರು. ಈ ಸಂದರ್ಭ ಸರ್ವಿಸ್ ಪತ್ರಿಕೆಯ ಸಂಪಾದಕಿ ರಮಿತಾ ಶೈಲೆಂದ್ರ ರಾವ್ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷರಾದ ರೋಟೇರಿಯನ್ ಮೋಹನ್ ಶೆಣೈ ಹಾಗೂ ಉಪಕಾರ್ಯದರ್ಶಿ ರೋಟೇರಿಯನ್ ಗೀತಾ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯದರ್ಶಿ ಇಕ್ಬಾಲ್ ಅಹಮದ್ ಅವರು ವಂದನಾರ್ಪಣೆ ಮಾಡಿದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles