ಹೆಬ್ರಿ: ಹೆಬ್ರಿ-ಬೀಡು-ಬಂಗಾರಗುಡ್ಡ ಸಂಪರ್ಕಿಸುವ 1ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವರಾದ ವಿ.ಸುನೀಲ್ ಕುಮಾರ್ ಮಂಗಳವಾರ ಗುದ್ದಲಿ ಪೂಜೆ ನಡೆಸುವುದರ ಮೂಲಕ ಚಾಲನೆ ನೀಡಿದರು.
ಗುದ್ದಲಿ ಪೂಜೆ ಬಳಿಕ ಮಾತನಾಡಿದ ಸಚಿವರು, ಪ್ರತಿ ಗ್ರಾಮದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅಭಿವೃದ್ಧಿಯಲ್ಲಿ ನಮ್ಮ ಜೊತೆ ಕೈಜೋಡಿಸಿ ಎಂದು ಹೇಳಿದರು.
ಗುದ್ದಲಿ ಪೂಜೆಯಲ್ಲಿ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ್ ಕುಮಾರ್ ಹಾಗೂ ಸದಸ್ಯರು ಸ್ಥಳೀಯ ಮುಖಂಡರಾದ ಗುರುದಾಸ್ ಶಣೈ, ಪ್ರವೀಣ್ ಬಲ್ಲಾಳ್, ಸತೀಶ್ ಪೈ, ಜ್ಯೋತಿ ಹರೀಶ್, ರಮೇಶ್ ಕುಮಾರ್, ಸೀತಾ ನದಿ ರಮೇಶ ಹೆಗ್ಡೆ, ನವೀನ್ ಅಡ್ಯಂತಾಯ, ಭೋಜ ಪೂಜಾರಿ ಜೀವನ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.