ಮಂಗಳೂರು: ಕೇರಳದ ಕಾಸರಗೋಡು ಕಡೆಯಿಂದ ಉಳ್ಳಾಲಕ್ಕೆ ಅಕ್ರಮವಾಗಿ 1ಕ್ವಿಂಟಲ್ 60ಕೆ.ಜಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.



ಹುಸೇನ್(24), ಮಹಮ್ಮದ್ ಜಾಂಬಿಲ್(25), ರಿಜ್ವಾನ್ ಮಂಜಿಲ್ ಕೋಡಿ, ಮಹಮ್ಮದ್ ಅಮೀನ್(21), ಸೋಹೈಬ್ ಅಕ್ತರ್(22) ಬಂಧಿತ ಆರೋಪಿಗಳು. ಇವರು, ಕಾಸರಗೋಡಿನ ಮೊಹಮ್ಮದ್ ಎಂಬಾತನಿಂದ ದನ ಖರೀದಿಸಿ ಅವರ ಮನೆಯಲ್ಲಿಯೇ ಗೋ ಹತ್ಯೆ ಮಾಡಿದ್ದರು. ಬಳಿಕ ಗೋ ಮಾಂಸನ್ನು ಉಳ್ಳಾಲಕ್ಕೆ ತಂದು ಯು.ಸಿ.ಇಬ್ರಾಹಿಂ ಬೀಪ್ ಸ್ಟಾಲ್ನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ. ಪ್ರಕರಣ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.