ಅರುಣಾಚಲ: ಹಿಮಪಾತದಡಿ ಸಿಲುಕಿದ್ದ ಏಳು ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಮಂಗಳವಾರ ತಿಳಿಸಿದೆ.
ಫೆ.6 ರಂದು ಅರುಣಾಚಲ ಪ್ರದೇಶದ ಕೆಮಾಲ್ ಸೆಕ್ಟರ್ ನಲ್ಲಿ ಹಿಮಪಾತವಾಗಿದ್ದು, ಅದರಲ್ಲಿ ಏಳು ಮಂದಿ ಭಾರತೀಯ ಯೋಧರು ಸಿಲುಕಿದ್ದರು. ಅವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಯುತ್ತಿತ್ತು. ಆದರೆ ಆ ಏಳು ಮಂದಿ ಯೋಧರು ಹುತಾತ್ಮರಾಗಿದ್ದಾರೆ ಅವರ ಶರೀರವನ್ನು ಹಿಮದಡಿಯಿಂದ ಹೋರತೆಗೆಯಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.