ಮಂಗಳೂರು: ಜಿಲ್ಲೆಯಲ್ಲಿ ಅಕ್ರಮವಾಗಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಮಾರಾಟ ಮಾಡಲು ಯತ್ನಿಸಿದ್ದ 6 ಮಂದಿ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದಲ್ಲಿ ಬಂಧಿಸಲಾಗಿದೆ.
ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದ 3 ಕೆ.ಜಿ. 40 ಗ್ರಾಂ. ತೂಕದ 3.48 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು, ಉಡುಪಿ ಮೂಲದ ಪ್ರಶಾಂತ್, ಸತ್ಯರಾಜ್, ರೋಹಿತ್, ರಾಜೇಶ್, ವಿರುಪಾಕ್ಷ, ನಾಗರಾಜ್ ಬಂಧಿತ ಆರೋಪಿಗಳು.
ಬಂಧಿತರು ತಮಿಳುನಾಡು ಮೂಲದ ಮೀನುಗಾರರಿಂದ ಅಂಬರ್ ಗ್ರೀಸ್ ಪಡೆದಿದ್ದು, ಮಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದಾರೆ. ಅಂಬರ್ ಗ್ರೀಸ್ ಅನ್ನು ಮಂಗಳೂರಿನ ಸುಂಗಂಧ ದ್ರವ್ಯ ಉತ್ಪಾದನ ಕಾರ್ಖಾನೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.