ಕಾರ್ಕಳ: ತಾಲೂಕಿನ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವವು ಫೆ.20 – ಫೆ.24ರ ವರೆಗೆ ನಡೆಯಲಿದೆ. ಈ ಮಹೋತ್ಸವು ಕೋವಿಡ್-19 ಮಾರ್ಗದರ್ಶಿ ನಿಯಮಗಳ ಅನುಸಾರ ನಡೆಯುತ್ತದೆ.
ವಾರ್ಷಿಕ ಮಹೋತ್ಸವದಲ್ಲಿ ಒಟ್ಟು 30 ಬಲಿಪೂಜೆಗಳು ನಡೆಯಲಿವೆ. ಫೆ.20 ರ ಬೆಳಿಗ್ಗೆ 10ಕ್ಕೆ ಶಿವಮೊಗ್ಗದ ಧರ್ಮಾಧ್ಯಕ್ಷ ಅ|ವಂ| ಫ್ರಾನ್ಸಿಸ್ ಸೆರಾವೊ ಎಸ್.ಜೆ., ಸಂಜೆ 4ಕ್ಕೆ ಮಂಗಳೂರು ಧರ್ಮಾಧ್ಯಕ್ಷ ಅ|ವಂ| ಪೀಟರ್ ಪಾವ್ಲ್ ಸಲ್ಡಾನ್ಹಾ, ಫೆ. 21ರ ಬೆಳಗ್ಗೆ 10ಕ್ಕೆ ಉಡುಪಿ ಧರ್ಮಾಧ್ಯಕ್ಷ ಅ|ವಂ| ಜೆರಾಲ್ಡ್ ಲೋಬೋ, ಫೆ. 22ರ ಬೆಳಗ್ಗೆ 10ಕ್ಕೆ ಬಳ್ಳಾರಿ ಧರ್ಮಾಧ್ಯಕ್ಷ ಅ|ವಂ| ಹೆನ್ರಿ ಡಿ’ಸೋಜಾ, ಫೆ. 23ರ ಬೆಳಗ್ಗೆ 10ಕ್ಕೆ ನಿವೃತ್ತ ಧರ್ಮಾಧ್ಯಕ್ಷ ಅ|ವಂ| ಅಲೋಶಿಯಸ್ ಪಾವ್ಲ್ ಡಿ’ ಸೋಜಾ, ಫೆ. 24ರ ಸಂಜೆ 4ಕ್ಕೆ ಬೆಳ್ತಂಗಡಿ ಧರ್ಮಾಧ್ಯಕ್ಷ ಅ|ವಂ| ಲಾರೆನ್ಸ್ ಮುಕ್ಕುಯಿ ಅವರು ಉತ್ಸವದ ಬಲಿಪೂಜೆ ನೆರವೇರಿಸಲಿದ್ದಾರೆ.
ಫೆ.20 – ಫೆ.24ರ ವರೆಗೆ ನಡೆಯುವ ಬಲಿಪೂಜೆಗಳು ಬೆಳಿಗ್ಗೆ 8, 10, 12 ಮಧ್ಯಾಹ್ನ 2, 4, 7 ಗಂಟೆಯಲ್ಲಿ ಒಟ್ಟು 6 ಬಲಿಪೂಜೆಗಳು ನಡೆಯುತ್ತದೆ ಎಂದು ಧರ್ಮಕೇಂದ್ರದ ನಿರ್ದೇಶಕ, ಪ್ರ. ಗುರು ವಂ| ಅಲ್ಬನ್ ಡಿ’ಸೋಜಾ; ಕೇಂದ್ರದ ಪಾಲನ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿ’ಸಿಲ್ವಾ ತಿಳಿಸಿದ್ದಾರೆ.