ಹೆಬ್ರಿ: ಅನಂತಪದ್ಮನಾಭ ಫ್ರೆಂಡ್ಸ್ ವತಿಯಿಂದ ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ವಠಾರದಲ್ಲಿ 4 ದಿನಗಳ ಕಾಲ ನಡೆದ 12ನೇ ವರ್ಷದ ಹೆಬ್ಬೇರಿ ಉತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮದ ಇಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಪ್ರಸಾದ್ ರಾವ್ ಅವರು ಅನಂತ ಪದ್ಮನಾಭನ ಸನ್ನಿಧಿಯಲ್ಲಿ ನಡೆಯುವ ಹೆಬ್ಬೇರಿ ಉತ್ಸವವು ನಮ್ಮೆಲ್ಲರ ಉತ್ಸವ. ಕಲಾ ಸೇವೆಯೂ ಭಗವಂತನ ಸೇವೆ. ಹೆಬ್ರಿ ಜನರಿಗೆ ಹೃದಯವಂತಿಕೆ ಇರುವುದರಿಂದ ಮಾತ್ರ ಹೆಬ್ಬೇರಿ ಉತ್ಸವ ಯಶಸ್ವಿಯಾಗಲು ಸಾಧ್ಯ. ನಾವೆಲ್ಲರೂ ಸೇರಿ ಹೆಬ್ಬೇರಿ ಉತ್ಸವ ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಟಿ.ಜಿ ಆಚಾರ್ಯ. ಶಿಕ್ಷಕ ಹಾಗೂ ಸಮಾಜಸೇವಕ ಶಶಿಧರ್ ಶೆಟ್ಟಿ, ಹೆಬ್ರಿ ಭಗತ್ ಸಿಂಗ್ ಯುವ ವೇದಿಕೆ ಅಧ್ಯಕ್ಷ ವಿಜಯ ಹೆಗ್ಡೆ ಅವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ರೂವಾರಿ ಶೇಖರ್ ಮಾತನಾಡಿ ಉತ್ಸವದ ಯಶಸ್ವಿಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಉಡುಪಿ ಶಸಸ್ತ್ರ ಮೀಸಲು ಪಡೆಯ ಎಎಸ್ಪಿ ರಾಘವೇಂದ್ರ, ಹೆಬ್ರಿ ಸಬ್ಇನ್ಸ್ ಪೆಕ್ಟರ್ ಮಹೇಶ್ ಟಿ.ಎಂ. ವಿದ್ಯುತ್ ಗುತ್ತಿಗೆದಾರ ಶ್ರೀನಿವಾಸ್ ಹೆಬ್ಬಾರ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪುಟ್ಟಣ್ಣ ಭಟ್, ಹೆಬ್ರಿ ಅನಂತಪದ್ಮನಾಭ ಫ್ರೆಂಡ್ಸ್ ನ ಅವಿನಾಶ್ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶಶಿಧರ್ ಶೆಟ್ಟಿ ವಂದಿಸಿದರು.