ಕಾರ್ಕಳ: ರಾಜಕೀಯ ನಾಯಕರು ನಾಯಕರೆಂದು ಗುರುತಿಸಿಕೊಂಡವರು ದ್ವಂದ್ವ ನಿಲುವು ಹಾಗೂ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಂಥನ ಅನಾವರಣ ದಿಬ್ಬಣ ಧಾರವಾಹಿಯ ಹಿರಿಯ ನಟ, ನಿರ್ದೇಶಕ ಎಸ್.ಎನ್ ಸೇತುರಾಮ್ ಹೇಳಿದರು.
ತಾಲೂಕಿನ ಅನಂತಶಯನದ ಹೋಟೆಲ್ ಪ್ರಕಾಶದ ಸಂಭ್ರಮ ಸಭಾಭವನದಲ್ಲಿ ಕಾರ್ಕಳ ಕಾಂತಾವರ ಕನ್ನಡ ಸಂಘ ಹಾಗೂ ಅಖಿಲ ಭಾರತೀಯ ಸಾಹಿತ್ಯ. ಪರಿಷತ್ ಕಾರ್ಕಳ ಘಟಕ ಇವುಗಳ ಸಹಯೋಗದಲ್ಲಿ ಅರಿವು ತಿಳಿವು ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ನಮ್ಮ ರಾಜಕೀಯ ಪ್ರಜ್ಞೆ ಹೇಗಿದೆ ಎಂಬ ವಿಷಯದ ಕುರಿತು ಮಾತನಾಡಿದ ಎಸ್.ಎನ್ ಸೇತುರಾಮ್ ಅವರು ನಮ್ಮ ದೇಶ ಹಾಗೂ ರಾಜ್ಯವು ರಾಜಕೀಯ ನಡೆಯ ಅವಾಂತರಗಳಿಂದ ಹಾಗೇ ಪ್ರಜೆಗಳಾಗಿ ತಲೆದೂಗುವ ನಾವು ನಮ್ಮ ಪ್ರಾಮಾಣಿಕತೆಯಿಂದ ನಮಗರಿಯದಂತೆ ಹೀನರಾಗುತ್ತಿದ್ದೇವೆ ಆದ್ದರಿಂದ ಜಾಗೃತರಾಗಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ, ಎಸ್.ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಗಣೇಶ್ ಜಾಲ್ಸೂರು, ಕಾರ್ಯದರ್ಶಿ ಸದಾನಂದ ನಾರಾವಿ ಉಪಸ್ಥಿತರಿದ್ದರು.