ಮಂಗಳೂರು: ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಿದ ಘಟನೆ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಜಪ್ಪಿನ ಮೊಗರು ಎಂಬಲ್ಲಿ 2 ಕೋಟಿ 20 ಲಕ್ಷ ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಕೊಡಗಿನ ಭಾಗಮಂಡಲದ ಜಾಬೀರ್ ಎಂ.ಎ, ಶಬಾದ್.ಎಲ್.ಕೆ ಹಾಗೂ ಕೇರಳದ ಕಾಂಞಂಗಾಡಿನ ಆಸೀರ್ ವಿ.ಪಿ, ಶರೀಫ್.ಎನ್ ಬಂಧಿತ ಆರೋಪಿಗಳು.
ವಾರಗಳ ಹಿಂದೆ ಕೋಣಾಜೆ ಠಾಣೆ ಪೊಲೀಸರು 3.48 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದು, ತಿಮಿಂಗಿಲ ವಾಂತಿ ಮಾರಾಟ ಭೇದಿಸಿದ ಎರಡನೇ ಪ್ರಕರಣ ಇದಾಗಿದೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.