ಕಾರ್ಕಳ: ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾದ ಘಟನೆ ಫೆ.15ರಂದು ಕಾರ್ಕಳ ಹಿರ್ಗಾದ ಹಾರ್ಜಡ್ದು ಕ್ರಾಸ್ ಬಳಿ ಸಂಭವಿಸಿದೆ.
ಬೆಂಗಳೂರು ಬನಶಂಕರಿ ಯ ಕೌಶಿಕ್, ನಾಗಶ್ರೀ, ವೈಷ್ಣವಿ, ತೇಜಸ್ ಅವರು ಕಾರ್ಕಳಕ್ಕೆ ಪ್ರವಾಸ ಬಂದಿದ್ದಾರೆ. ಅವರಿದ್ದ ಮಾರುತಿ ವ್ಯಾಗನರ್ ಕಾರು ಅಪಘಾತಕ್ಕಿಡಾಗಿ ಸಂಪೂರ್ಣವಾಗಿ ಜಖಂ ಗೊಂಡಿದೆ.
ಕಾರು ಚಾಲಕ ಕೌಶಿಕ್ ನ ಎಡ ಭುಜ, ಮುಖಕ್ಕೆ ಗಾಯವಾಗಿದೆ. ವೈಷ್ಣವಿ, ತೇಜಸ್, ನಾಗಶ್ರೀ ಇವರಿಗೆ ತರುಚಿದ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.