Sunday, June 8, 2025

ಎಲ್ಲಾ ಸಮುದಾಯದಲ್ಲಿ ಕಿಡಿಗೇಡಿಗಳಿದ್ದಾರೆ: ಮಹಮ್ಮದ್ ಶಾಫಿ

ಮಂಗಳೂರು: ಉಡುಪಿಯಲ್ಲಿ ಹಿಜಾಬ್ ವಿವಾದ ಆರಂಭವಾದಾಗ ವಕ್ಫ್ ಬೋರ್ಡ್ ಉಡುಪಿಯಲ್ಲೇ ತಣ್ಣಗಾಗುವ ಪ್ರಯತ್ನ ನಡೆಸಿತ್ತು. ಎಲ್ಲಾ ಸಮುದಾಯದಲ್ಲಿ ಕಿಡಿಗೇಡಿಗಳಿದ್ದಾರೆ. ಇದನ್ನು ಯಾವುದೋ ಲಾಭಕ್ಕಾಗಿ ದೊಡ್ಡದು ಮಾಡಬೇಕಿತ್ತು. ಉಡುಪಿಯ ಈ ವಿಚಾರ ಯಾಕೆ ರಾಜ್ಯ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಯಿತು? ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಶಾಫಿ ಸಾಅದಿ ಮಂಗಳೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿದ್ಯಾಸಂಸ್ಥೆಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿರುವುದು ದುರದೃಷ್ಟಕರ. ಶಿಕ್ಷಣ ಸಂಸ್ಥೆಗಳಲ್ಲಿ ಕೋಮು ಬಣ್ಣ ಬರಬಾರದು. ಹಿಜಾಬ್, ಕೇಸರಿ ಶಾಲು ವಿಚಾರದಲ್ಲಿ ಕಿಡಿಗೇಡಿಗಳ ಕೈ ಮೇಲಾಗಬಾರದು. ಈ ವಿಚಾರ ಮುಂದಿಟ್ಟು ತಮ್ಮ ಬೇಳೆ ಬೇಯಿಸುವ ಅವಕಾಶ 6 ಜನ ವಿದ್ಯಾರ್ಥಿನಿಯರು, ಪೋಷಕರ ಜೊತೆ ವಕ್ಫ್ ಅಧಿಕಾರಿ ನಾಝಿಯಾ ಮಾತನಾಡಿದ್ದರು. ಪ್ರಾಂಶುಪಾಲರು, ಪೋಷಕರ ಜೊತೆ ಜ‌.25ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದೆ. ಹಿಜಾಬ್ ಷರೀಯತ್ ನೀಡಿರುವ ಹಕ್ಕು ಅದನ್ನು ಕೊಡುವಂತೆ ಹೇಳಿದ್ದೆ. ವಿದ್ಯಾರ್ಥಿನಿಯರಿಗೆ ಬುದ್ಧಿ ಮಾತು ಹೇಳಿದ್ದೆ. ಹಿಜಾಬ್ ವಿಚಾರದಲ್ಲಿ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಸೌಹಾರ್ದತೆ ಕದಡುವಾಗ ನಾವು ಸುಮ್ಮನಿರಲು ಆಗುವುದಿಲ್ಲ ಎಂದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles