ಕುಂದಾಪುರ: ಶಿವಮೊಗ್ಗದಲ್ಲಿ ನಡೆದ ಯುವಕನ ಹತ್ಯೆ ಅನಾಗರಿಕ ಸಂಸ್ಕೃತಿ ತೋರುತ್ತದೆ. ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಲಾಗುತ್ತದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಕುಂದಾಪುರದ ತಲ್ಲೂರಿನಲ್ಲಿ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು ಶಿವಮೊಗ್ಗದವರೆ ಗೃಹ ಸಚಿವರಾಗಿರುವುದರಿಂದ ಅವರೇ ಸರಿಯಾದ ಕ್ರಮ ಕೈಗೊಳ್ಳುತ್ತಾರೆ. ಈ ಪ್ರಕ್ಷುಬ್ದತೆ ಕರಾವಳಿ ಜಿಲ್ಲೆಗೆ ಯಾವ ಕಾರಣಕ್ಕೂ ಹಬ್ಬುವುದಿಲ್ಲ. ಕರಾವಳಿಯವರು ಬುದ್ಧಿವಂತರಾಗಿದ್ದು ಏನೂ ಸಮಸ್ಯೆಯಾಗುವುದಿಲ್ಲ. ಕೋಟ್ಯಾಂತರ ಜನರು ಇರುವಾಗ ಗದ್ದಲ ನಡೆದಿದ್ದಕ್ಕೆ ಸರ್ಕಾರದ ವೈಫಲ್ಯ ಎಂದು ಹೇಳಲಾಗುವುದಿಲ್ಲ. ಸರ್ಕಾರ ಇಂತಹ ದುಷ್ಕರ್ಮಿಗಳನ್ನು ಮಟ್ಟಹಾಕಲು ಸಿದ್ಧವಾಗಿದೆ ಎಂದರು.