ಮಂಗಳೂರು: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ವಿ.ಹಿಂ.ಪ. ಭಜರಂಗದಳದಿಂದ ಮಂಗಳೂರಿನ ಕದ್ರಿ ಸರ್ಕಲ್ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ನೂರಾರು ಬಜರಂಗದಳ ಕಾರ್ಯಕರ್ತರು ಭಾಗಿಯಾಗಿದ್ದು, ಅಮರ್ ಹೈ ಹರ್ಷ ಎಂದು ಘೋಷಣೆ ಕೂಗಿದರು. ಎಸ್ಡಿಪಿಐ, ಪಿಎಪ್ಐ ಸಂಘಟನೆ ಬ್ಯಾನ್ ಮಾಡುವಂತೆ ಆಗ್ರಹಿಸಿದರು.