ಉಡುಪಿ: ಪೇಜಾವರ ಮಠ ಹಾಗೂ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಜಂಟಿ ಆಶ್ರಯ ಮತ್ತು ‘ಒಪ್ಪಿಕೋ ಪಚ್ಚೆವನ ಸಿರಿ ಅಭಿಯಾನ’ದಡಿಯಲ್ಲಿ ವಿನಾಶದಂಚಿನಲ್ಲಿರುವ ವೃಕ್ಷ ಸಂರಕ್ಷಣಾ ಕಾರ್ಯಕ್ರಮ ಫೆ.26 ರಂದು ಮಧ್ಯಾಹ್ನ 3ಕ್ಕೆ ನಗರದ ರಥಬೀದಿಯ ಶ್ರೀರಾಮ ವಿಠಲ ಸಭಾ ಭವನದಲ್ಲಿ ನಡೆಯಲಿದೆ.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶಿರ್ವಚನ ನೀಡಲಿದ್ದು, ಕಾರ್ಯಕ್ರಮದಲ್ಲಿ ಶ್ರೀತಾಳೆ ಸಂರಕ್ಷಣೆ ಮಾಡಿರುವ ಜಗಜೀವನ್ ಹೆಗ್ಡೆ, ರಾಜೀವಿ ಅವರನ್ನು ಗೌರವಿಸಲಾಗುವುದು ಎಂದು ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಫ್ರೊ. ಎಸ್. ಎ. ಕೃಷ್ಣಯ್ಯ ಅವರು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಕ್ಷೇತ್ರ ಸಹಕಾರಿ ಗಣೇಶ್ರಾಜ್ ಸರಳೇಬೆಟ್ಟು ಉಪಸ್ಥಿರಿದ್ದರು.