ಉಡುಪಿ: ಕರಾವಳಿಯ ಹೊಚ್ಚ ಹೊಸ ಸುದ್ದಿವಾಹಿನಿ “ನ್ಯೂಸ್ ಪ್ಲಸ್ ಕನ್ನಡ” ಸೋಮವಾರ ಲೋಕಾರ್ಪಣೆಗೊಂಡಿತು. ಕಿದಿಯೂರು ಹೋಟೆಲ್ನ ಶೇಷಶಯನ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಸುನಾದ್ ಗೌತಮ್ ನ್ಯೂಸ್ ಪ್ಲಸ್ ಕನ್ನಡ ವಾಹಿನಿಯನ್ನು ಲೋಕಾರ್ಪಣೆಗೊಳಿಸಿದರು.
ಸಾಂದೀಪನೀ ಸಾಧನಾಶ್ರಮ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಧ್ಯಕ್ಷತೆವಹಿಸಿ ಮಾತನಾಡಿ ಮಾಧ್ಯಮಗಳು ನಕಾರಾತ್ಮಕ ಸುದ್ದಿಗಳಿಗೆ ಒತ್ತುನೀಡದೆ, ಸಕಾರಾತ್ಮಕ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಮಾಡಬೇಕು ಎಂದು ಆರ್ಶೀವಚನ ನೀಡಿದರು.
ಡಯಾಸಿಸ್ ಆಫ್ ಉಡುಪಿ ಪಿಆರ್ಒ ಫಾದರ್ ಚೇತನ್ ಲೋಬೋ ಮಾತನಾಡಿ ಟಿವಿ ಮಾಧ್ಯಮಗಳು ಸಮಾಜದ ಎಳಿಗೆಗಾಗಿ ಕಾರ್ಯನಿರ್ವಹಿಸಬೇಕು. ಟಿಆರ್ಪಿ ಜಿದ್ದಿಗೆ ಬಿದ್ದು ಇಂದಿನ ಕೆಲ ಮಾಧ್ಯಮಗಳು ಸಮಾಜದ ದಿಕ್ಕು ತಪ್ಪಿಸುತ್ತಿದೆ. ನ್ಯೂಸ್ ಪ್ಲಸ್ ಕನ್ನಡ ವಿಭಿನ್ನ ರೀತಿಯಲ್ಲಿ ಸಮಾಜ ಜನರ ಕಷ್ಟಗಳಿಗೆ ಸ್ಪಂದಿಸುವಂತಾ ವಾಹಿನಿಯಾಗಿ ಹೊರಹೊಮ್ಮಲಿ ಎಂದು ಆಶಿರ್ವದಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಂಡವಿ ಬಿಲ್ಡರ್ಸ್ ನ ಜೆರ್ರಿ ಡಯಾಸ್, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಸಂಯೋಜಕ ಹರೀಶ್ ಕಿಣಿ, ಸರಳಾ ವುಡ್ ಇಂಡಸ್ಟ್ರಿ ಮಾಲಕ ಸುಹಾಸ್ ಹೆಗ್ಡೆ, ಸಾಯಿರಾಧ ಗ್ರೂಪ್ ಆಫ್ ಕಂಪನಿ ಮನೋಹರ್ ಎಸ್ ಶೆಟ್ಟಿ, ಉದ್ಯಮಿ ಮೂನಿಯಾಲ್ ಉದಯ್ ಕುಮಾರ್ ಶೆಟ್ಟಿ, ಶಿವಾಜಿ ಎಸ್ ಸುವರ್ಣ, ವೆರೋನಿಕಾ ಕರ್ನೆಲಿಯೊ, ಬಿ.ಗೋವಿಂದರಾಜ್ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಸ್ಥ ಕ್ಸೇವಿಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ನ್ಯೂಸ್ ಪ್ಲಸ್ ಕನ್ನಡ ಸುದ್ದಿ ವಾಹಿನಿಯ ಸಿಬಂದಿಗಳು ಉಪಸ್ಥಿತರಿದ್ದರು.