ಮೂಡುಬಿದಿರೆ: ಬಂಟರ ಸಂಘ ಹೊಸಬೆಟ್ಟು – ಕರಿಂಜೆ ಹಾಗೂ ಯುವಬಂಟರ ಗ್ರಾಮ ಸಮಿತಿ ಬಿರಾವು ಜಂಟಿ ಸಭೆಯು ಬಿರಾವು ಸಹೋದರ ಯುವಕ ಮಂಡಲದ ವಠಾರದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ, ಹೋಟೆಲ್ ಪಂಚರತ್ನ ಇಂಟರ್ ನ್ಯಾಶನಲ್ನ ಆಡಳಿತ ನಿರ್ದೇಶಕ ತಿಮ್ಮಯ್ಯ ಶೆಟ್ಟಿ ವಹಿಸಿದ್ದರು.
ಈ ಸಂದರ್ಭ ಕರಿಂಜೆ ಬಂಟರ ಸಂಘದ ಅಧ್ಯಕ್ಷ ಅದೋಳಿ ವಿಶ್ವನಾಥ ಶೆಟ್ಟಿ, ಮೂಡುಬಿದಿರೆ ಬಂಟರ ಸಂಘದ ಕಾರ್ಯಕಾರಿ ಸದಸ್ಯರಾದ ಬಾವ ರಮೇಶ ಶೆಟ್ಟಿ ಹೊಸಬೆಟ್ಟು, ಕರಿಂಜೆ ಮಜಲೋಡಿ ಹರೀಶ ಶೆಟ್ಟಿ, ಸುರೇಶ ಶೆಟ್ಟಿ ಹಾಗೂ ಕಾರ್ಯದರ್ಶಿ ವಸಂತಿ ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟು ಉಪಸ್ಥಿತರಿದ್ದರು.
ಹೊಸಬೆಟ್ಟು ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಯವರ ಪರವಾಗಿ ರಮೇಶ ಶೆಟ್ಟಿ ಸ್ವಾಗತಿಸಿ, ಸುರೇಶ ಶೆಟ್ಟಿ ಪ್ರಸ್ತಾವನೆಯೊಂದಿಗೆ ಉದ್ದೇಶ ಮಂಡಿಸಿದರು.
ಕಾರ್ಯಕ್ರಮವನ್ನು ರಾಮಣ್ಣ ರೈ ಅವರು ಸ್ವಾಗತಿಸಿ, ಯುವಬಂಟರ ಸಂಘದ ಅಧ್ಯಕ್ಷ ಕರಿಂಜೆ ದೇರಂದಬೆಟ್ಟು ಪ್ರಸಾದ್ ಶೆಟ್ಟಿ ವಂದಿಸಿದರು.