ಮಂಗಳೂರು: ಯುದ್ಧ ಭೂಮಿಯಲ್ಲಿ ಯಾವುದೇ ದೇಶ ತನ್ನ ಪ್ರಜೆಗಳನ್ನು ರಕ್ಷಿಸಿಲ್ಲ. ಆದರೆ ಭಾರತ ತನ್ನ ಪ್ರಜೆಗಳನ್ನು ರಕ್ಷಣೆ ಮಾಡಿದೆ. ಮೋದಿ ತಕ್ಷಣ ನಾಲ್ಕು ಸಚಿವರನ್ನು ನೇಮಿಸಿ ರಕ್ಷಣಾ ಕಾರ್ಯ ಮಾಡಿದ್ದಾರೆ. ಈ ಸಂಧರ್ಭ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆ ಸಂದರ್ಭದಲ್ಲಿ ಇರೇನ್ ಮತ್ತು ಇರಾಕ್ ಯುದ್ಧ ಆಯಿತು. ಆ ಸಂಧರ್ಭದಲ್ಲಿ ಎಷ್ಟು ಮಂದಿಯ ರಕ್ಷಣೆ ಮಾಡಿದ್ದಾರೆ ವರದಿ ಕೊಡಲಿ. ಸಿದ್ದರಾಮಯ್ಯ ಹಿರಿಯ ರಾಜಕೀಯ ವ್ಯಕ್ತಿಯಾಗಿ ಈ ರೀತಿ ಮಾತನಾಡಬಾರದು. ಇಂತಹ ಸಮಯದಲ್ಲಿ ರಾಜಕೀಯ ಹುಡುಕುವುದು ದೇಶಕ್ಕೆ ಅವಮಾನ. ಇದು ಚಾಣಾಕ್ಷ ರಾಜಕಾರಣಿ ನೀತಿಯಲ್ಲ. ಈ ರೀತಿ ಮಾತನಾಡುವುದು ಸಿದ್ದರಾಮಯ್ಯನವರ ಸಣ್ಣತನ ತೋರಿಸುತ್ತದೆ. ರಾಷ್ಟ್ರದ ವಿಚಾರದಲ್ಲಿ ವಿರೋಧ ಮಾಡುವುದು ಚಿಲ್ಲರೆ ರಾಜಕಾರಣ ಎಂದರು.