ಉಡುಪಿ: ಉಕ್ರೇನ್ನ ಖಾರ್ಕೀವ್ನಿಂದ ವಿದ್ಯಾರ್ಥಿ ರೋಹನ್ ಧನಂಜಯ್ ಅವರು ಶುಕ್ರವಾರ ಮಧ್ಯಾಹ್ನ ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ರೋಹನ್ ಉಕ್ರೇನ್ನ ಖಾರ್ಕೀವ್ ನ ನ್ಯಾಷನಲ್ ಮೆಡಿಕಲ್ ವಿ.ವಿ.ಯ ಅಂತಿಮ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಭಾರತ ಸರ್ಕಾರ ವ್ಯವಸ್ಥೆಗೊಳಿಸಿದ ವಿಮಾನದಲ್ಲಿ ಹೊಸದಿಲ್ಲಿಗೆ ಆಗಮಿಸಿದ್ದಾರೆ.
ಉಕ್ರೇನ್ನಿಂದ ಬುಧವಾರ ಪೊಲೆಂಡ್ಗೆ ಆಗಮಿಸಿದ್ದ ಅವರು ನಿನ್ನೆ ಮಧ್ಯರಾತ್ರಿ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ರಾಜ್ಯ ಸರ್ಕಾರ ವ್ಯವಸ್ಥೆಗೊಳಿಸಿದ ವಿಮಾನದಲ್ಲಿ ಇಂದು ಸಂಜೆ ಹೊಸದಿಲ್ಲಿಯಿಂದ ಹೊರಟು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ರೋಹನ್ ತಂದೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ. ಧನಂಜಯ್ ತಿಳಿಸಿದ್ದಾರೆ.