Sunday, June 8, 2025

ಉಡುಪಿ: ಕೋರ್ಟ್‌ ಒಳಗೆ ಸಾಕ್ಷಿದಾರನಿಂದ ವಕೀಲನ ಮೇಲೆ ಹಲ್ಲೆ

ಉಡುಪಿ: ಅಪಘಾತ ಪ್ರಕರಣದ ಸಾಕ್ಷಿದಾರ ಒಬ್ಬ ವಕೀಲನ ಮೇಲೆ ಕೋರ್ಟ್ ಒಳಗೆ ಹಲ್ಲೆ ನಡೆಸಿದ ಘಟನೆ ಉಡುಪಿಯ ಕೋರ್ಟ್ ಆವರಣದಲ್ಲಿ ಶನಿವಾರ ಸಂಜೆ ನಡೆದಿದೆ.

ಹಲ್ಲೆಗೊಳಗಾದ ವಕೀಲ ಕಟಪಾಡಿ ಮಟ್ಟುವಿನ ಗುರುರಾಜ್. ಅವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿ ಕೊರಂಗ್ರಪಾಡಿಯ ಶಾಹಿದ್ ಎಂಬಾತನನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಾಹಿದ್ ಅಪಘಾತ ಪ್ರಕರಣವೊಂದಕ್ಕೆ ಸಾಕ್ಷ್ಯ ಹೇಳಲು ಬೆಳಿಗ್ಗೆ ಕೋರ್ಟ್‌ಗೆ ಬಂದಿದ್ದರು. ಆದರೆ ಸಂಜೆಯವರೆಗೆ ಶಾಹಿದ್‌ನನ್ನು ಸಾಕ್ಷ್ಯ ಹೇಳಲು ಕರೆಯದೆ ನ್ಯಾಯಾಧೀಶರು ವಿಚಾರಣೆಯ ದಿನಾಂಕ ಮುಂದೂಡಿದಕ್ಕೆ ಕೋಪಗೊಂಡ ಶಾಹಿದ್ ಕೋರ್ಟ್ ಒಳಗೆ ವಕೀಲನ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ವಕೀಲರ ಗುಂಪು ಆರೋಪಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles