ಕಾರ್ಕಳ: ಕಳೆದ ಹಲವು ದಿನಗಳಿಂದ ವಿದ್ಯುತ್ ವ್ಯತ್ಯಯದಿಂದಾಗಿ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನೀರು ಸರಬರಾಜಾಗದೇ ಸಾರ್ವಜನಿಕರು ಕಷ್ಟ ಪಡುತ್ತಿರುವುದನ್ನು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಕಾರ್ಕಳ ಪುರಸಭೆ ಕಛೇರಿಯಲ್ಲಿ ಮಂಗಳವಾರ ಧರಣಿ ನಡೆಸಿದರು.
ಈ ಕುರಿತು ಪುರಸಭಾ ಆಡಳಿತದ ಗಮನಕ್ಕೆ ತಂದಿದ್ದರೂ ಕನಿಷ್ಠ ಪಕ್ಷ ತಾತ್ಕಾಲಿಕ ನೆಲೆಯಲ್ಲಿ ಜನರೇಟರ್ ವ್ಯವಸ್ಥೆ ಮಾಡದೇ ಇದ್ದು, ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಊರಿನಲ್ಲಿ ಮಾರಿಪೂಜೆ ಆಚರಣೆಯಾಗುತ್ತಿದ್ದು, ಜನರು ನೀರಿಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭ ವಿಪಕ್ಷ ನಾಯಕ ಅಷ್ಪಕ್ ಅಹಮ್ಮದ್, ಪುರಸಭಾ ಸದಸ್ಯರಾದ ಶುಭೋದ್ ರಾವ್, ಪ್ರತಿಮಾ ರಾಣೆ, ರೆಹಮತ್ ಶೇಖ್, ವಿನ್ನಿ ಬೋಲ್ಡ್ ಮೆಂಡೋನ್ಸ್, ಸೀತಾರಾಮ್, ಹರೀಶ್, ಪ್ರಭಾ ಮೊದಲಾದವರು ಉಪಸ್ಥಿತರಿದ್ದರು