ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ವತಿಯಿಂದ ಕುಂಭಾಸಿ ಕೊರಗ ಕಾಲನಿಯಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರೊಂದಿಗೆ ವಿಶ್ವ ಮಹಿಳಾ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ಲಚ್ಚು ಅವರನ್ನು ಗೌರವಿಸಲಾಯಿತು. ಲಚ್ಚು ಅವರು ಬಾಲ್ಯದಿಂದಲೇ ಬುಟ್ಟಿಗಳನ್ನು ನೇಯಲು ಪ್ರಾರಂಭಿಸಿದರು. ಆನೆಗುಡ್ಡೆ ಸೇರಿದಂತೆ ಎಲ್ಲಾ ದೇವಾಲಯಗಳ ಹಣ್ಣು ಕಾಯಿ ಬುಟ್ಟಿಗಳನ್ನು ಇವರೇ ನೇಯ್ದಿರುತ್ತಾರೆ.
ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್, ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಅಧ್ಯಕ್ಷ ಗಣೇಶ ಕೊರಗ, ಕೊರಗ ಸಂಘಟನೆಯ ಮುಖಂಡರುಗಳಾದ ಶೇಖರ್ ಮರವಂತೆ ಗಣೇಶ್ ಬಾರ್ಕೂರು, ಮಕ್ಕಳ ಮನೆ ಕುಂಭಾಶಿಯ ಮೇಲ್ವಿಚಾರಕಿ ವಿನೀತಾ, ಕುಂಭಾಶಿ ಗ್ರಾ.ಪಂ. ಸದಸ್ಯೆ ರಾಜಶ್ರೀ ಮತ್ತಿತರು ಉಪಸ್ಥಿತರಿದ್ದರು.
ಸಮಶ್ರೀ ಧನ್ಯ ಸ್ವಾಗತಿಸಿ, ಆಶಾಲತಾ ಶೆಟ್ಟಿ ವಂದಿಸಿ, ಕಾರ್ಯದರ್ಶಿ ಜಯಶೀಲ ಕಾಮತ್ ಕಾರ್ಯಕ್ರಮ ನಿರೂಪಿಸಿದರು.