ಮೂಡುಬಿದಿರೆ: ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ಹಿರಿಯ ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಅವರಿಗೆ ಮೂಡುಬಿದಿರೆ ಪ್ರೆಸ್ ಕ್ಲಬ್ನಲ್ಲಿ ಬುಧವಾರ ಸನ್ಮಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಾಧ್ಯಮ ಏನೆಂದು ತಿಳಿಯದ ಹೊತ್ತಿನಲ್ಲಿ ಮಾಧ್ಯಮ ಲೋಕಕ್ಕೆ ಕಾಲಿಟ್ಟೆ. ಬೆಳ್ತಂಗಡಿಯ ವಾರಪತ್ರಿಕೆ “ಜೈ ಕನ್ನಡಮ್ಮ” ಪತ್ರಿಕೆಯ ವರದಿಗಾರಳಾಗಿ ಸೇರಿಕೊಳ್ಳುವ ಮೂಲಕ ಪತ್ರಿಕಾರಂಗಕ್ಕೆ ಪ್ರವೇಶಿಸಿದೆ. ನಾನು ಈ ಮಾಧ್ಯಮ ಕ್ಷೇತ್ರದಲ್ಲಿ ಇನ್ನೂ ಕಲಿಯಬೇಕಿದೆ ಎಂದರು.
ಈ ಸಂದರ್ಭ ಜೆಸಿಐ ಸಂಸ್ಥೆ ಮೂಡುಬಿದಿರೆಯ ಅಧ್ಯಕ್ಷೆ ಶಾಂತಲಾ ಆಚಾರ್ಯ, ಉಪಾಧ್ಯಕ್ಷೆ ಶಾಲಿನಿ, ಖಜಾಂಚಿ ಹಮೀದ್, ಜೆಸಿಐ ಸಂಸ್ಥೆಯ ಯೋಜನಾ ನಿರ್ದೇಶಕಿ ವರ್ಷಾ ಕಾಮತ್, ಜೆಸಿಐ ಮಹಿಳಾ ಅಧ್ಯಕ್ಷೆ ಮಮತಾ ಸಚ್ಚಿದಾನಂದ, ವಲಯ 15ರ ಯುವ ಮತ್ತು ಕ್ರೀಡಾ ಸಂಯೋಜಕ ಸಂತೋಷ್, ಜೆಸಿಐ ಹಾಗೂ ಸಂಗೀತಾ, ವೀಣಾ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.