ಉಡುಪಿ: ಶ್ರೀಕೃಷ್ಣಮಠದ ರಥಬೀದಿಯಲ್ಲಿ ಅಸ್ವಸ್ಥರಾಗಿದ್ದ ಸ್ವಾಮೀಜಿಯೊಬ್ಬರನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಬುಧವಾರ ನಡೆದಿದೆ.
ಸ್ವಾಮೀಜಿ ಬಿದ್ದ ಪರಿಣಾಮ ಒಂದು ಕೈ ಸ್ವಾದೀನ ಕಳೆದುಕೊಂಡಿದ್ದಾರೆ. ಇವರ ಹೆಸರು, ಸಿದ್ಧರಾಜು ಸ್ವಾಮೀಜಿ(54). ಮೈಸೂರಿನ ಮುನೇಶ್ವರ ನಗರದ ನಿವಾಸಿ ಎಂದು ತಿಳಿಸಿದ್ದಾರೆ. ವಾರಸುದಾರರು ಅಥವಾ ಶಿಷ್ಯರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.