ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಪಟ್ಟಿರುವ ಒಟ್ಟು 166 ಖೈದಿಗಳನ್ನು ಉತ್ತಮ ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ಅವಧಿಪೂರ್ವ ಬಿಡುಗಡೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಗೆ ತಿಳಿಸಿದರು.
2022ರ ಮಾ.2ರಂದು ರಾಜ್ಯಪಾಲರು ಒಟ್ಟು 161 ಜೀವಾವಧಿ ಶಿಕ್ಷಾ ಖೈದಿಗಳನ್ನು ಉತ್ತಮ ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿದ್ದಾರೆ. ಎಲ್.ಸಿ.ಆರ್ ಸಮಿತಿ ಪರಿಶೀಲನೆಯ ನಂತರ, ಒಟ್ಟು 166 ಜೀವಾವಧಿ ಶಿಕ್ಷಾ ಖೈದಿಗಳನ್ನು ಉತ್ತಮ ನಡತೆಯ ಆಧಾರದ ಮೇಲೆ ಉಳಿದ ಶಿಕ್ಷಾ ಅವಧಿಯನ್ನು ಮಾಫಿ ಮಾಡಿ ಅವಧಿಪೂರ್ವ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.