ಕುಂದಾಪುರ: ಒಣಹುಲ್ಲು ಸಾಗಿಸುತ್ತಿದ್ದ ವಾಹನಕ್ಕೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿದ ಘಟನೆ ಕುಂದಾಪುರ ತಾಲೂಕಿನ ಕೊರ್ಗಿ ಗಿರಿಜಾ ಚಂದ್ರಶೇಖರ್ ಹೆಗ್ಡೆ ಸ. ಹಿ. ಪ್ರಾ. ಶಾಲೆಯ ಎದುರು ಶನಿವಾರ ಸಂಭವಿಸಿದೆ.
ಶಿಕಾರಿಪುರದಿಂದ ಕೊರ್ಗಿಗೆ ಜಾನುವಾರುಗಳ ಮೇವಿಗಾಗಿ ವಾಹನವೊಂದು ಬೈಹುಲ್ಲು ಸಾಗಿಸುತ್ತಿತ್ತು. ಈ ವಾಹನ ಶಾಲಾ ಸಮೀಪ ಬರುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದಿದೆ.
ಬೆಂಕಿ ತಗುಲಿದ ಪರಿಣಾಮ ವಾಹನದಲ್ಲಿದ್ದ ಸುಮಾರು 30ಸಾವಿರಕ್ಕೂ ಅಧಿಕ ಮೊತ್ತದ ಹುಲ್ಲು ಹಾನಿಯಾಗಿದೆ. ಚಾಲಕನ ಸಮಯ ಪ್ರಜ್ಞೆ ಹಾಗೂ ಸ್ಥಳೀಯರ ಕಾರ್ಯಾಚರಣೆಯಿಂದ ಸಂಭವನೀಯ ಅನಾಹುತ ತಪ್ಪಿದೆ.