ಕುಂದಾಪುರ: ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ ನೇತೃತ್ವದಲ್ಲಿ 125ನೇ ಸ್ವಚ್ಛತಾ ಅಭಿಯಾನ ಕೋಡಿ ಕಡಲತೀರದಲ್ಲಿ ಭಾನುವಾರ ನಡೆಯಿತು.
ನಮ್ಮ ಮನೆಯಿಂದಲೇ ಪ್ರಕೃತಿ ಮೇಲೆ ಕಾಳಜಿ ಆರಂಭಗೊಂಡರೆ ಪರಿಸರ ಉಳಿಯಲು ಸಾಧ್ಯ. ಕಡಲ ತೀರಗಳಲ್ಲಿ ಕಸ ಎಸೆಯುವರು ಮನುಷ್ಯರ ಎಂಬುದು ಪಶ್ನೆ? ಎಲ್ಲರೂ ನೈಜ ಚಾರಣಿಗರು ಅಲ್ಲ, ಮೋಜು ಮಸ್ತಿಗೆ ಬರುವ ಚಾರಣಿಗರ ಸಂಖ್ಯೆ ಹೆಚ್ಚಾಗಿ ಕಾಣುತ್ತಿದೆ ಇದರಿಂದ ಪಾಕೃತಿಕ ದುರಂತಗಳು ಹೆಚ್ಚುತ್ತಿದೆ. ಕಡಲ ತೀರದಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯ. ಇಂಥ ಸಂಘಟನೆಗಳು ಗ್ರಾಮ ಗ್ರಾಮದಲ್ಲಿ ಹುಟ್ಟಿಗೊಂಡು ಪರಿಸರ ಸಂರಕ್ಷಣೆಗೊಳ್ಳುತ್ತದೆ ಎಂದು ಮಂಗಳೂರಿನ ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಅಭಿಪ್ರಾಯಪಟ್ಟರು.


ಸ್ವಚ್ಚತಾ ಅಭಿಯಾನದಲ್ಲಿ ಅರಣ್ಯ ಇಲಾಖೆಯ ಕುಂದಾಪುರದ ಉಪ ಸಂರಕ್ಷಣಾಧಿಕಾರಿ ಡಾ.ಆಶಿಶ್ ರೆಡ್ಡಿ, ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್, ಮೂಳೆತಜ್ಞ ಡಾ. ದುರ್ಗಾ ಪ್ರಸಾದ್, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ ಆಂದೋಲನದ ಕೆಂಚನೂರು ಸೋಮಶೇಖರ ಶೆಟ್ಟಿ, ಬೆಂಗಳೂರಿನ ರಮೇಶ್ ರಾವ್, ಎಫ್ಎಸ್ಎಲ್ನ ವೆಂಕಟೇಶ್, ದಿನೇಶ್, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್, ಆಶಾಲತಾ ಶೆಟ್ಟಿ, ಕುಂದಾಪುರ ಸನ್ ರೈಸ್ ರೋಟರಿಯ ಗಣೇಶ್ ಹಾಗೂ ಸದಸ್ಯರು, ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಭಾಸ್ಕರ್ ಪೂಜಾರಿ, ಪುಂಡಲೀಕ ಬಂಗೇರ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ ಸ್ವಯಂಸೇವಕರು ಉಪಸ್ಥಿತರಿದ್ದರು.