Saturday, June 7, 2025

ಸಾಹಿತಿ, ರಂಗಕರ್ಮಿ ಪ್ರೊ. ಮೇಟಿ ಮುದಿಯಪ್ಪ ನಿಧನ

ಉಡುಪಿ: ಸಾಹಿತಿ, ರಂಗಕರ್ಮಿ ಪ್ರೊ. ಮೇಟಿ ಮುದಿಯಪ್ಪ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ವಿಧಿವಶರಾದರು.

ವೃತ್ತಿಯಲ್ಲಿ ಶಿಕ್ಷಕರಾದ ಪ್ರೊ. ಮೇಟಿ ಮುದಿಯಪ್ಪ ಅವರು ಉತ್ತಮ ಸಾಹಿತಿ, ರಂಗನಟ, ಚಲನಚಿತ್ರ ನಟ ಕೂಡ ಹೌದು. ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮೇಟಿಯವರು ಉಧ್ಘೋಷ, ಕಡಲಾಳದ ಮುತ್ತು ನನ್ನೊಳಗಿನ ಕವಿತೆ, ಮಾನವೀಯತೆಯ ಸುತ್ತ ಮುತ್ತ, ಕಡ್ಯಾವ ನೆನಪು ಕೃತಿಗಳನ್ನು ರಚಿಸಿದ್ದಾರೆ.

1985 ರಿಂದ ರಂಗಭೂಮಿ (ರಿ) ಉಡುಪಿಯ ರಂಗಚಟುವಟಿಕೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಂಗಭೂಮಿ(ರಿ) ಉಡುಪಿಯ ನಾಟಕಗಳಾದ ನಾಗಮಂಡಲ, ಗಾಂಧಿ ನಗರ, ಚಮ್ಮಾರನ ಚಾಲಾಕಿ ಹೆಂಡತಿ, ಹೇಮಂತ, ಸೂರ್ಯ ಶಿಕಾರಿ, ಪರಿಹಾರ  ಹೀಗೆ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles