ಕುಂದಾಪುರ: ಟೀಕೆಗಳನ್ನು ಮೆಟ್ಟಿ ನಿಂತು ಮನೋಬಲ ವೃದ್ಧಿಸಿಕೊಂಡರಷ್ಟೇ ಮಹಿಳಾ ಸಬಲೀಕರಣ ಸಾಧ್ಯ ಉಳಿತಾಯದ ಮೂಲಕ, ಸಂಘಸಂಸ್ಥೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಇವೆರಡನ್ನು ಮಾಡಬಹುದು ಎಂದು ಉಡುಪಿ ಜಿ.ಪಂ. ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.
ಅವರು ಗುರುವಾರ ಕುಂದಾಪುರದ ರೋಟರಿ ಕುಂದಾಪುರ ಮಿಡ್ಟೌನ್ ಹಾಲ್ನಲ್ಲಿ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟ, ರೋಟರಿ ಕ್ಲಬ್ ಕುಂದಾಪುರ ಮಿಡ್ಟೌನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಹಯೋಗದೊಂದಿಗೆ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷೆ ರಾಧಾದಾಸ್ ವಹಿಸಿದ್ದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಕಾರಿ ಮುರಳೀಧರ ಶೆಟ್ಟಿ, ರೋಟರಿ ಮಾಜಿ ಸಹಾಯಕ ಗವರ್ನರ್ ಆವರ್ಸೆ ಸುಧಾಕರ ಶೆಟ್ಟಿ, ಉದ್ಯಮಿ ಸುಬ್ಬಣ್ಣ ಶೆಟ್ಟಿ ಮಾರ್ಕೋಡು, ಉಡುಪಿಯ ಮಹಿಳಾ ಉದ್ಯಮಿಗಳ ಪವರ್ ವೇದಿಕೆ ಮಾಜಿ ಅಧ್ಯಕ್ಷೆ ತಾರಾ ತಿಮ್ಮಯ್ಯ, ಪ್ರಿಯಾಂಕಾ, ತಾಲೂಕು ಮಹಿಳಾ ಒಕ್ಕೂಟ ಗೌರವಾಧ್ಯಕ್ಷೆ ಹೇಮಾವತಿ ಹೆಗ್ಡೆ, ಕಾರ್ಯದರ್ಶಿ ಜಯಂತಿ ಐತಾಳ್, ಜಿಲ್ಲಾ ಸೀಶಕ್ತಿ ಸಂಘದ ಕಾರ್ಯದರ್ಶಿ ಪ್ರೇಮಾ, ಕುಂಭಾಶಿ ಪಂ. ಅಧ್ಯಕ್ಷೆ ಶ್ವೇತಾ, ಅಂಗನವಾಡಿ ಒಕ್ಕೂಟಗಳ ರಾಜ್ಯ ಕಾರ್ಯದರ್ಶಿ ಉಷಾ ಕೆ. ಉಪಸ್ಥಿತರಿದ್ದರು.


ಈ ವೇಳೆ ಸಮಾಜಸೇವಾ ಕಾರ್ಯಕರ್ತೆ ಕಾಂತಿ ಸಿ. ಭಂಡಾರಿ, ರೋಟರಿ ಅಸಿಸ್ಟಂಟ್ ಗವರ್ನರ್ ಜಯಪ್ರಕಾಶ್ ಶೆಟ್ಟಿ, ಅಂಗನವಾಡಿ ಯೂನಿಯನ್ ಅಧ್ಯಕ್ಷೆ ಫಿಲೋಮಿನಾ ಅವರನ್ನು ಸಮ್ಮಾನಿಸಲಾಯಿತು. ಲೇಖಕಿ, ನಾಟಿವೈದ್ಯೆ ಶಶಿಕಲಾ ಆಚಾರ್ಯ ನಾಗೂರು ಅವರು ಬರೆದ ‘ಮನೆ ಅಂಗಳದ ಮದ್ದು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.