Monday, June 9, 2025

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ 60 ನೇ ವಾರ್ಷಿಕೋತ್ಸವ; ಡಾ ಟಿಎಂಎ ಪೈ ಆರೋಗ್ಯ ಸೇವಕ ಪ್ರಶಸ್ತಿ ಪ್ರಧಾನ ಸಮಾರಂಭ & ಪ್ರಿವಿಲೇಜ್ ಕಾರ್ಡ್ ಬಿಡುಗಡೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ 60 ನೇ ವಾರ್ಷಿಕೋತ್ಸವದ ಅಂಗವಾಗಿ ಉಡುಪಿ ಜಿಲ್ಲೆಯ ಹಿರಿಯ ನಿವೃತ್ತ ವೈದ್ಯರಿಗೆ ಡಾ.ಟಿ.ಎಂ.ಎ.ಪೈ ಆರೋಗ್ಯ ಸೇವಕ ಪ್ರಶಸ್ತಿ ಮತ್ತು ವೈದ್ಯರ ಪ್ರಿವಿಲೇಜ್ ಕಾರ್ಡ್‌ನ ಬಿಡುಗಡೆ ಕಾರ್ಯಕ್ರಮವು ಮಣಿಪಾಲದ ಹೋಟೆಲ್ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತ್ತು ಡಾ.ಹೆಚ್.ಎಸ್ ಬಲ್ಲಾಳ್ ಅವರು ಜಂಟಿಯಾಗಿ ಪ್ರಿವಿಲೇಜ್ ಕಾರ್ಡ್ ಬಿಡುಗಡೆ ಮಾಡಿದರು.

ಉಡುಪಿ ಜಿಲ್ಲೆಯ ಕಾರ್ಕಳದಿಂದ ಡಾ.ಶೈಲಾ ಎಸ್.ನಾಯಕ್, ಹಾಗೂ ಡಾ.ಗಿರೀಶ್ ಶೆಣೈ, ಉಡುಪಿಯಿಂದ ಡಾ.ಕೃಷ್ಣದೇವ ಕಲ್ಕೂರ, ಮಂದಾರ್ತಿಯಿಂದ ಡಾ.ಎನ್.ಸುರೇಶ್ಚಂದ್ರ ಶೆಟ್ಟಿ, ಕುಂದಾಪುರದಿಂದ ಡಾ.ಅಂಪಾರ ವಸಂತಕುಮಾರ್ ಶೆಟ್ಟಿ ಅವರಿಗೆ ಡಾ ಟಿ ಎಂ ಎ ಪೈ ಆರೋಗ್ಯ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂಡಿ ವೆಂಕಟೇಶ್, ಮಾಹೆ ಮಣಿಪಾಲದ ಸಹ-ಉಪ ಕುಲಪತಿ ಡಾ.ಪಿಎಲ್‌ಎನ್‌ಜಿ ರಾವ್, ಪ್ರಾದೇಶಿಕ ಕಾರ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತನ ಮತ್ತಿತರ ಮಾಹೆ ಮಣಿಪಾಲದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆಎಂಸಿ ಡೀನ್ ಡಾ ಶರತ್ ಕುಮಾರ್ ಸ್ವಾಗತಿಸಿ, ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ವಂದಿಸಿದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles