ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕುಂದಾಪುರ ತಾಲೂಕು ತೆಕ್ಕಟ್ಟೆ ವಲಯದ ತೆಕ್ಕಟ್ಟೆ ಕಾರ್ಯಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ತೆಕ್ಕಟ್ಟೆ ಕನ್ನುಕೆರೆಯ ನವಶಕ್ತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿತು.
ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಗಣೇಶ ಬಿ, ಕುಂದಾಪುರ ತಾಲೂಕು ಹಿರಿಯ ಯೋಜನಾಧಿಕಾರಿ ಮುರಳೀಧರ.ಕೆ.ಶೆಟ್ಟಿ, ಕೃಷಿ ಅಧಿಕಾರಿ ಚೇತನ್ ಕುಮಾರ್, ವಲಯ ಮೇಲ್ವಿಚಾರಕ ಪಾಂಡ್ಯನ್, ವಲಯ ಒಕ್ಕೂಟದ ಅಧ್ಯಕ್ಷೆ ಜಯಂತಿ ಕಾಂಚನ್, ಮಾಜಿ ಒಕ್ಕೂಟದ ಅಧ್ಯಕ್ಷ ರಮೇಶ್ ಆಚಾರ್ಯ, ತೆಕ್ಕಟ್ಟೆ ಫ್ರೆಂಡ್ಸ್ನ ಸಂತೋಷ್, ಸೇವಾ ಪ್ರತಿನಿಧಿಗಳಾದ ಸಾರಿಕಾ, ಅಮೃತಾ, ಪ್ರಭಾವತಿ, ಪ್ರೇಮಾ ವಿಜಯ್, ಉಷಾ, ವಿಧ್ಯಾ, ಅನಿತಾ, ತಾಂತ್ರಿಕ ಸಹಾಯಕರಾದ ನೇತ್ರಾವತಿ, ಶ್ವೇತಾ, ಒಕ್ಕೂಟದ ಅಧ್ಯಕ್ಷೆ ಆಶಲತಾ, ಅನುಷಾ ಮತ್ತಿತರರು ಉಪಸ್ಥಿತರಿದ್ದರು.
ಪುರೋಹಿತರಾದ ಮಂಜುನಾಥ ಮತ್ತು ಕರುಣಾಕರ ಐತಾಳ್ ಪೂಜಾ ಕೈಂಕರ್ಯ ನೆರವೇರಿಸಿದರು.