ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಜಾತ್ರೆಯು ಇಂದಿನಿಂದ ಆರಂಭಗೊಂಡಿದೆ. ಮುಂಜಾನೆಯಿಂದಲೇ ದೇವಿ ಸನ್ನಿಧಿಗೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಮಧ್ಯಾಹ್ನದ ವೇಳೆಗೆ ಮೂಕಾಂಬಿಕಾ ರಥೋತ್ಸವ ನಡೆಯಲಿದೆ.
ರಾಜ್ಯದಲ್ಲಿ ಜಾತ್ರೆ ಸಂಘರ್ಷ ತೀವ್ರಗೊಂಡಿದ್ದು, ಈ ಬಾರಿಯ ಕೊಲ್ಲೂರಿನ ಜಾತ್ರೆಯಲ್ಲೂ ವಿವಾದ ಸೃಷ್ಟಿಯಾಗಿದೆ. ಜಾತ್ರೆಗೆ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ವಿ.ಹಿಂ.ಪ. ಬಜರಂಗದಳ ವತಿಯಿಂದ ಗ್ರಾ.ಪಂ.ಗೆ ಮನವಿ ಮಾಡಲಾಗಿತ್ತು. ಈ ಸಂಘರ್ಷದ ನಡುವೆಯೇ ಜಾತ್ರೆ ಆರಂಭವಾಗಿದ್ದು, ಈಗಾಗಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದೆ.