ಮಂಗಳೂರು: ಹಿಂದೂ ವರ್ತಕರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ವೈರಲ್ ಆಗುತ್ತಿದ್ದು, ದ.ಕ ಜಿಲ್ಲೆಯ ಉಪ್ಪಿನಂಗಡಿಯ ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ.
ನಕಲಿ ಸಂದೇಶ ಸಾರಿದ ದುಷ್ಕರ್ಮಿಗಳ ವಿರುದ್ಧ ಉಪ್ಪಿನಂಗಡಿ ವರ್ತಕರ ಸಂಘ ಪೊಲೀಸರಿಗೆ ದೂರು ನೀಡಿದ್ದು, ಮತೀಯ ಸಂಘರ್ಷ ಮೂಡಿಸಲು ಪ್ರಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.
ಉಪ್ಪಿನಂಗಡಿಯ 32 ಹಿಂದೂ ಅಂಗಡಿಗಳ ಹೆಸರು ಉಲ್ಲೇಖಿಸಿ ಆ ಅಂಗಡಿಗಳಿಂದ ಮುಸ್ಲಿಮರಿಗೆ ಯಾವುದೇ ಸಾಮಾಗ್ರಿಗಳನ್ನು ಕೊಡುವುದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಬೇಕರಿ, ಮೆಡಿಕಲ್, ಸೆಲೂನ್, ಜನರಲ್ ಸ್ಟೋರ್ಗಳ ಹೆಸರಲ್ಲಿ ಸಂದೇಶ ವೈರಲ್ ಆಗುತ್ತಿದೆ.