ಮೂಡುಬಿದಿರೆ: ಎರಡು ಬೈಕ್ ಗಳ ನಡುವಿನ ಮುಖಾಮುಖಿ ಡಿಕ್ಕಿಯ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಾಯಗೊಂಡ ಘಟನೆ ಮೂಡುಬಿದರೆ ತಾಲೂಕಿನ ಕೊಡಂಗಲ್ಲುವಿನಲ್ಲಿ ಸೋಮವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಹೊಸಂಗಡಿಯ ಪೆರಿಂಜೆ ಸಮೀಪದ ಎದುರುಗುಡ್ಡೆ ನಿವಾಸಿ ರವೀಂದ್ರ ಪೂಜಾರಿ(35) ಎಂದು ಗುರುತಿಸಲಾಗಿದೆ. ಇವರ ಸಹೋದರ ರಾಜೇಂದ್ರ ಪೂಜಾರಿ ಗಾಯಗೊಂಡಿದ್ದಾರೆ.
ರವೀಂದ್ರ ಪೂಜಾರಿ ತನ್ನ ಬೈಕ್ನಲ್ಲಿ ಸಹೋದರ ರಾಜೇಂದ್ರ ಪೂಜಾರಿಯನ್ನು ಕೂರಿಸಿಕೊಂಡು ಮೂಡಬಿದಿರೆ ಕಡೆಗೆ ಹೋಗುತ್ತಿದ್ದ ಸಂದರ್ಭ ಕೊಡಂಗಲ್ಲು ಸಮೀಪ ಎದುರುಗಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ರವೀಂದ್ರ ಪೂಜಾರಿ ಸಾವನ್ನಪ್ಪಿದ್ದು, ಬೈಕ್ನ ಹಿಂಭಾಗದಲ್ಲಿ ಕೂತಿದ್ದ ಇವರ ಸಹೋದರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ರವೀಂದ್ರ ಪೂಜಾರಿಯವರ ಎರಡು ಕಣ್ಣುಗಳನ್ನು ಮನೆಯವರು ಸ್ವಇಚ್ಚೆಯಿಂದ ದಾನ ಮಾಡಲು ನಿರ್ಧರಿಸಿದ್ದು, ಈ ಮೂಲಕ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಬೈಕ್ಗಳ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು
Subscribe
Login
0 Comments