ಕುಂದಾಪುರ: ಗೋವಧೆ ಮಾಡಿ ತ್ಯಾಜ್ಯ ಎಸೆಯಲು ತೆರಳುತ್ತಿದ್ದ ಆರೋಪಿಯು ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಕಂಡ್ಲೂರು ಸಮೀಪದ ಧೂಪದಕಟ್ಟೆ ವಾಲ್ತೂರು ಬಳಿ ನಡೆದಿದೆ.
ಕಂಡ್ಲೂರು ನಿವಾಸಿ ಕಾಜಿ ಅಫ್ಘಾನ್ ಪರಾರಿಯಾದ ಆರೋಪಿ. ಧೂಪದಕಟ್ಟೆ ವಾಲ್ತೂರು ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನ ನಿಲ್ಲಿಸಿ ಆರೋಪಿ ಅಫ್ಘಾನ್ ಪರಾರಿಯಾಗಿದ್ದಾನೆ. ಆರೋಪಿಯ ಬಳಿ ಇದ್ದ ಚೀಲದಲ್ಲಿ ದನದ ಬಾಲ, ಚರ್ಮ, ತಲೆಯ ಭಾಗ, ಕೊಂಬು, ಕಿವಿಯ ಭಾಗ, ದನದ ಕಾಲಿನ ಗೊರಸುಗಳು, ಹೊಟ್ಟೆಯ ತ್ಯಾಜ್ಯ ಪತ್ತೆಯಾಗಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ನಿರಂಜನ ಗೌಡ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಘಟನೆ ನಡೆದಿದ್ದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗೋವಧೆ ಮಾಡಿ ತ್ಯಾಜ್ಯ ಎಸೆಯಲು ತೆರಳುತ್ತಿದ್ದ ಆರೋಪಿ ಪರಾರಿ
Subscribe
Login
0 Comments