ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪೂತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಹಿಂದೂಗಳ ಆಟೋಗಳನ್ನೇ ಬಳಸುವಂತೆ ಹಿಂದೂ ಜಾಗರಣ ವೇದಿಕೆ ಅಭಿಯಾನ ಆರಂಭಿಸಿದೆ.
ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವವು ಏ.10ರಿಂದ 20ರವರೆಗೆ ನಡೆಯಲಿದೆ. ಈ ಸಂಧರ್ಭ ಆಟೋಗಳು ಭಗವಧ್ವಜ ಹಾಕಿ ಓಡಾಡುವಂತೆ ಹಿ.ಜಾ.ವೇ ಮನವಿ ಮಾಡಿದ್ದು, ಆಟೋಗಳಿಗೆ ಭಗವಧ್ವಜ ನೀಡುವ ಮೂಲಕ ಅಭಿಯಾನ ಆರಂಭಿಸಲಾಗಿದೆ.