ಶಿರ್ವ: ಶಿರ್ವ ಶಂಕರಪುರದ ಇನ್ನಂಜೆ ರೈಲ್ವೆ ನಿಲ್ದಾಣ ರಸ್ತೆಯ ಸಮೀಪ ನಿರ್ಮಾಣಗೊಂಡ ನೂತನ ಕೆನರಿ ಗಾರ್ಡನ್ ಮೈದಾನದ ಉದ್ಘಾಟನಾ ಸಮಾರಂಭವು ಏ.30ರ ಸಂಜೆ 6.30ಕ್ಕೆ ಜರುಗಲಿದೆ.
ಕಾರ್ಯಕ್ರಮದಲ್ಲಿ ಶಂಕರಪುರ ಚರ್ಚ್ನ ಧರ್ಮಗುರುಗಳಾದ ಫರ್ಡಿನಾಂಡ್ ಗೊನ್ಸಾಲ್ವೆಸ್, ಉದ್ಯಾವರ ಚರ್ಚ್ನ ಧರ್ಮಗುರುಗಳಾದ ಸ್ಟಾನಿ ಬಿ. ಲೊಬೊ, ಚಿತ್ರದುರ್ಗದ ಹಿರಿಯೂರು ಚರ್ಚ್ನ ಧರ್ಮಗುರುಗಳಾದ ಫ್ರಾಂಕ್ಲಿನ್ ಡಿಸೋಜ, ಕಾರ್ಕಳದ ಅತ್ತೂರು ಚರ್ಚ್ನ ಧರ್ಮಗುರುಗಳಾದ ಅಲ್ಬನ್ ಡಿಸೋಜ ಅವರು ಆಶೀರ್ವಚನ ನೀಡಲಿದ್ದಾರೆ. ಹಾಗೂ ಫ್ರಾಂಕಿ ಕ್ರಸ್ಟೊ ಮತ್ತು ಸ್ಯಾಂಡ್ರಾ ಕ್ರಸ್ಟೊ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9845141816 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.