ಬೆಳ್ಮಣ್: ಆಸ್ತಿ ಪಡೆಯುವ ಹಿನ್ನೆಲೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಘಟನೆ ಕಾರ್ಕಳ ತಾಲೂಕಿನ ಸೂಡಾ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಶಂಕರ ಮೇರ ಎಂದು ಗುರುತಿಸಲಾಗಿದೆ.
ಪಿತ್ರಾರ್ಜಿತವಾಗಿ ಸೇರಬೇಕಾದ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ನಾಲ್ವರು ಸಹೋದರಿಯರಿದ್ದರೂ, ತಂದೆ ತಾಯಿಗೆ ಒಬ್ಬನೇ ಮಗ ಎಂದು ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಬಗ್ಗೆ ಕಾರ್ಕಳ ತಾಲೂಕಿನ ಸೂಡಾ ಗ್ರಾಮದ ಶಂಕರ ಮೇರ ಎಂಬಾತನ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬAಧಿಸಿ ಭಾಗಿರತಿ ಎಂಬುವವರು ತಮ್ಮ ಸಹೋದರ ಶಂಕರ ಮೇರ ಎಂಬಾತನ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ಕಳದ ಮಾಯಿಲ ಅಸ್ಲರ್ ಯಾನೆ ಮಾಯಿಲ ಮೇರ ಇವರಿಗೆ ಗುಲಾಬಿ, ಭವಾನಿ, ವಿನೋದ, ಭಾಗಿರತಿ ಹಾಗೂ ಶಂಕರ ಮೇರ ಎಂಬ ಐದು ಜನ ಮಕ್ಕಳಿದ್ದು, ಇವರು ಕಾರ್ಕಳದ ಸೂಡಾ ಗ್ರಾಮದಲ್ಲಿ ಸರ್ವೆ ನಂಬರ್ 224 /1 ರಲ್ಲಿ 2 ಎಕರೆ 26 ಸೆಂಟ್ಸ್ ಜಾಗ ಹೊಂದಿದ್ದರು. ಇವರು ತಮ್ಮ ಆಸ್ತಿಗೆ ಸಂಬAಧಿಸಿ ಜೀವಿತಾವಧಿಯಲ್ಲಿ ಯಾವುದೇ ರಿಜಿಸ್ಟ್ರೀ ದಾಖಲೆಗಳನ್ನು ಮಾಡಿರುವುದಿಲ್ಲ. ಇವರ ಮರಣಾನಂತರ ಇವರ ಮಗನಾದ ಶಂಕರ ಮೇರ ತಂದೆ ತಾಯಿಗೆ ತಾನೊಬ್ಬನೇ ಮಗ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಂದೆಯಿAದ ಬರೆಬೇಕಿದ್ದ ಆಸ್ತಿಯನ್ನು ಒಬ್ಬನೇ ಹಕ್ಕುದಾರನನ್ನಾಗಿ ಬಿಂಬಿಸಿದ್ದಾನೆ. ಈತನ ಈ ಕೃತ್ಯಕ್ಕೆ ತಂದೆಯ ಅವಧಿಯಲ್ಲಿ ಗ್ರಾಮಕರಣಿಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇವರ ಕುಟುಂಬಕ್ಕೆ ಆಪ್ತರೆನಿಸಿಕೊಂಡಿದ್ದ ಗ್ರಾಮ ಸಹಾಯಕರಾದ ರಮೇಶ್ ದೇವಾಡಿಗ ಅವರು ಶಂಕರ ಮೇರ ಅವರಿಗೆ ನಕಲಿ ದಾಖಲೆ ಸೃಷ್ಟಿಸುವಲ್ಲಿ ಸಹಕಾರ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾಯಿಲ ಮೇರ ಹಾಗೂ ನರ್ಸಿ ಮೊಸೆರ್ತಿ ದಂಪತಿಗೆ ಶಂಕರ ಮೇರ ಒಬ್ಬನೇ ಮಗ ಎಂದು ಪ್ರಮಾಣ ಪತ್ರ ನೀಡುವಲ್ಲಿ ಸ್ಥಳೀಯರಾದ ಬೆಂಜಮಿನ್ ಡಿಸೋಜ ಸೂಡ, ಜಯರಾಮ್ ಶೆಟ್ಟಿ ಸೂಡ, ಸೂರಜ್ ಕುಲಾಲ್ ಸೂಡ, ಚಂದ್ರಕಲಾ ಜೋಗಿ ಸೂಡ, ರಮೇಶ್ ಜೋಗಿ ಸೂಡ ಅವರು ಸಹಿ ಹಾಕಿ ಸುಳ್ಳು ಸಾಕ್ಷಿ ನೀಡುವ ಮೂಲಕ ಸುಳ್ಳು ದಾಖಲೆ ಮಾಡಲು ಸಹಕರಿಸಿ, ಪಂಚನಾಮೆಗೆ ಸಹಿ ಹಾಕಿದ್ದಾರೆ.
ಆರೋಪಿಯ ವಿರುದ್ಧ ಐಪಿಸಿ ಕಲಂ 406, 465, 468 ರಂತೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಭಗೀರಥಿ ಅವರು ದಾಖಲೆಗಳನ್ನು ತಾಲೂಕು ಕಚೇರಿಯಿಂದ ತೆಗೆಸಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಆಸ್ತಿಯ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಆರೋಪ:ಸಹೋದರನ ವಿರುದ್ಧ ಸಹೋದರಿ ದೂರು
Subscribe
Login
0 Comments