ಮಂಗಳೂರು: ರಾಜ್ಯದೆಲ್ಲೆಡೆ ಇಂದು ಸಂಭ್ರಮದ ರಂಜಾನ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಮಂಗಳೂರಿನ ಆಯಿಷಾ ಮಸ್ಜಿದ್ ಅಡ್ಡೂರಿನಲ್ಲಿ ಈದ್ ನಮಾಜ್ ಹಾಗೂ ಕುತುಬಾ ನಡೆಯಿತು. ಈದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.
ಕುತುಬಾವನ್ನು ಅಬ್ಬಾಸ್ ಮೌಲ್ವಿಯವರು ನೆರವೇರಿಸಿದರು. ಕುತುಬಾದಲ್ಲಿ ಸಮಾಜದಲ್ಲಿ ಶಾಂತಿ, ಹಾಗೂ ಸೌಹಾರ್ದಕ್ಕಾಗಿ ಸರ್ವರೂ ಪ್ರಯತ್ನಿಸಿ ಹಾಗೂ ಸರ್ವ ದರ್ಮಿಯರು ಪ್ರೀತಿಯಿಂದ ಜೀವಿಸಲು ಸಹಕಾರಿಯಾಗಲಿ ಎಂದು ಸಂದೇಶ ನೀಡಿದರು. ಸೃಷ್ಟಿಕರ್ತನಾದ ಅಲ್ಲಾಹುನು ನಮ್ಮೆಲ್ಲರನ್ನೂ ಅನುಗ್ರಹಿಸಲಿ ಹಾಗೂ ಸಮಾಜದಲ್ಲಿ ಏಕದೇವರಾಧನೆಯ ಸಂದೇಶವು ಪ್ರಸರಿಸಲಿ ಎಂದರು.